ಬೆಳಗಾವಿ: ದಕ್ಷಿಣ ಭಾರತ ಜೈನ ಸಮುದಾಯದ ಖ್ಯಾತ ನಾಯಕ ಹಾಗೂ ಅಧ್ಯಕ್ಷರಾಗಿದ್ದ ರಾವುಸಾಹೇಬ್ ಪಾಟೀಲ್ ಅವರು ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ.
80 ವರ್ಷದ ರಾವಸಾಹೇಬ್ ಪಾಟೀಲ್ ಅವರು ಮೂಲತಃ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾವ ಗ್ರಾಮದವರು. ಸಹಕಾರ ಕ್ಷೇತ್ರ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯದಲ್ಲಿ ಸಕ್ರಿಯವಾಗಿದ್ದ ರಾವಸಾಹೇಬ್ ಅವರು ವಿಶೇಷವಾಗಿ ಇಡೀ ದಕ್ಷಿಣ ಭಾರತ ಜೈನ ಸಮುದಾಯದ ಅಭಿವೃದ್ಧಿಗೆ ಶ್ರಿಮಿಸಿ ಹೆಸರು ವಾಸಿಯಾಗಿದ್ದ ನಾಯಕ.
ಇದನ್ನೂ ಓದಿ: ಜೈಲುಪಾಲಾದ ದರ್ಶನ್: ಅಭಿಮಾನಿಗಳಿಂದ ಹೋಟೆಲ್ ಹೆಸರು ಬದಲಾವಣೆ
ರಾವಸಾಹೇಬ್ ಪಾಟೀಲ್ ನಿಧನದಿಂದ ಜೈನ ಸಮುದಾಯ ನಾಯಕತ್ವ ಕಳೆದುಕೊಂಡಂತಾಗಿದ್ದು ಅವರ ಸ್ವ ಗ್ರಾಮ ಬೋರಗಾವ ಗ್ರಾಮದಲ್ಲಿ ಇಂದು ಸಂಜೆ ಅಂತ್ಯ ಸಂಸ್ಕಾರ ನೆರವೇರಿದೆ.