ಆನೇಕಲ್: ಕೆರೆಯ ಬಳಿ ಮದುವೆ ಫೋಟೋಶೂಟ್ಗೆಂದು ಹೋಗಿದ್ದ ವೇಳೆ ಬೃಹತ್ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿ ಜನರನ್ನು ಭಯಭೀತರನ್ನಾಗಿಸಿದ ಘಟನೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ರಾಗಿಹಳ್ಳಿಯಲ್ಲಿ ನಡೆದಿದೆ.
ರಾಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತರಾಯನ ಕೆರೆಯಲ್ಲಿ ಈ ಹಿಂದೆಯೂ ದನ, ಕುರಿ ಮತ್ತು ಮೇಕೆಗಳು ಬಾಯಾರಿಕೆಗೆ ನೀರು ಕುಡಿಯಲು ಹೋದಾಗ ಮೊಸಳೆ ದಾಳಿ ಮಾಡಿರುವ ಮಾತುಗಳು ಕೇಳಿ ಬಂದಿದೆ. ಇನ್ನು, ಈ ಕೆರೆಯ ಬಳಿ ಮುತ್ತುರಾಯಸ್ವಾಮಿ ದೇವಾಲಯವಿದ್ದು ನಿತ್ಯ ನೂರಾರು ಭಕ್ತರು ಇಲ್ಲಿಗೆ ಬರುವುದುಂಟು, ಇದೀಗ ಇಲ್ಲಿ ಮೊಸಳೇ ಇರುವ ವಿಚಾರ ತಿಳಿದು ಜನ ಆತಂಕಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: Power TV Impact: ಸಲಿಂಗ ಪ್ರಕರಣ; ಡಾ.ಸೂರಜ್ ರೇವಣ್ಣ ಅರೆಸ್ಟ್
ಈ ಕುರಿತು ಹಲವು ಬಾರಿ ಅರಣ್ಯ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು ಆದರೇ, ಯಾವುದೇ ಕ್ರಮ ಕೈಗೊಂಡಿಲ್ಲ. ಕಂಡು ಕಾಣದ ರೀತಿಯಲ್ಲಿರುವ ಅರಣ್ಯ ಅಧಿಕಾರಿಗಳು ವರ್ತಿಸುತ್ತಿದ್ದು ಅಧಿಕಾರಿಗಳ ಈ ನಡೆಗೆ
ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.