ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿ ಪವಿತ್ರಾಗೌಡ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಪಾಲಾಗಿದ್ದು ಇಂದು ಪವಿತ್ರಾರನ್ನು ಭೇಟಿಯಾಗಲು ಬಂದ ಪವಿತ್ರಾ ಸಹೋದರ ಮಾಧ್ಯಮದವರ ಮೇಲೆ ಗರಂ ಆಗಿರುವ ಘಟನೆ ನಡೆದಿದೆ.
ಜೈಲಿನಲ್ಲಿರುವ ಪವಿತ್ರಾ ಭೇಟಿಗೆ ಪವಿತ್ರಾ ಸಂಬಂಧಿಕರು ಆಗಮಿಸಿದ್ದಾರೆ. ಈ ವೇಳೆ ಪವಿತ್ರ ಸಹೋದರ ಕೂಡ ಆಗಮಿಸಿದ್ದ ಈ ಸಂದರ್ಭದಲ್ಲಿ ಮಾದ್ಯಮದವರು ವಿಡೀಯೋ ಚಿತ್ರೀಕರಿಸುವುದನ್ನು ಗಮನಿಸಿದ ಆತ, ಯಾಕ್ರಿ ವೀಡಿಯೋ ಮಾಡ್ತೀರ ನಿಮಗೆ ಮಾಡೋಕೆ ಬೇರೆ ಕೆಲಸ ಇಲ್ವಾ ಎಂದು ದರ್ಪದ ಮಾತುಗಳನ್ನಾಡಿದ್ದಾನೆ.
ಇದನ್ನೂ ಓದಿ: ನಟ ದರ್ಶನ್ ನಂಬಿ ಸಿನಿಮಾಗೆ ಹಣ ಹಾಕಿದ್ದ ನಿರ್ಮಾಪಕರಿಗೆ 30 ಕೋಟಿ ಸಂಕಷ್ಟ!
ಇನ್ನು, ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಪವಿತ್ರಾಗೌಡಗೆ ಇಂದು 6024 ಎಂಬ ಖೈದಿ ಸಂಖ್ಯೆಯನ್ನು ನೀಡಿದ್ದಾರೆ. ಅಷ್ಟೆ ಅಲ್ಲದೆ ಪವಿತ್ರಾ ಗೌಡ ಗ್ಯಾಂಗ್ನ ಎಲ್ಲಾ ಸದಸ್ಯರಿಗೂ ಖೈದಿ ಸಂಖ್ಯೆಯನ್ನು ನೀಡಿದ್ದಾರೆ.