ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನವಾಗಿರೋ ನಟ ದರ್ಶನ್ ಆರೋಗ್ಯದಲ್ಲಿ ಏರುಪೇರಾಗಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ 11 ದಿನದಲ್ಲಿ ಆರೋಪಿ ದರ್ಶನ್ ತೂಕ ಕಡಿಮೆಯಾಗಿದೆ. ಅಲ್ಲದೆ ಬಿಪಿಯಲ್ಲಿ ಮಹತ್ತರ ಬದಲಾವಣೆ ಆಗಿರೋ ಎಕ್ಸ್ಲೂಸಿವ್ ಮೆಡಿಕಲ್ ವರದಿ ಪವರ್ ಟಿವಿಗೆ ಲಭ್ಯವಾಗಿದೆ.
ಕಸ್ಟಡಿಯಲ್ಲಿದ್ದ ದಿನಗಳಲ್ಲಿ ದರ್ಶನ್ ಬಿಪಿ ದುಪ್ಪಟ್ಟು ಹೆಚ್ಚಾಗಿರೋದು ಮೆಡಿಕಲ್ ಎಕ್ಸಾಮಿನೇಷನ್ ವರದಿಯಲ್ಲಿ ಬಹಿರಂಗವಾಗಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ ಅಷ್ಟು ದಿನ ಆರೋಪಿ ನಟ ದರ್ಶನ್ ಟೆನ್ಷನ್ನಲ್ಲೆ ಕಾಲ ಕಳೆಯುತ್ತಿದ್ದಾರೆ ಅನ್ನೋದು ವೈದ್ಯಕೀಯ ತಪಾಸಣೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ: ನಟ ದರ್ಶನ್ ನಂಬಿ ಸಿನಿಮಾಗೆ ಹಣ ಹಾಕಿದ್ದ ನಿರ್ಮಾಪಕರಿಗೆ 30 ಕೋಟಿ ಸಂಕಷ್ಟ!
ಇನ್ನು ಪ್ರಕರಣದ A2 ಆರೋಪಿ ದರ್ಶನ್ ದೇಹದ ತೂಕದಲ್ಲು ಕೂಡ ವ್ಯತ್ಯಾಸ ಕಂಡು ಬಂದಿದೆ. ನಟ ಕೇವಲ ಎರಡು ದಿನ ಅಂತರದಲ್ಲಿ ಒಂದು ಕೆ.ಜಿ ತೂಕ ಕಡಿಮೆ ಆಗಿದೆ. 107 kg ಇದ್ದ ದರ್ಶನ್ ಎರಡು ದಿನ ಅಂತರದಲ್ಲಿ ಒಂದು ಕೆಜಿ ತೂಕ ಕಡಿಮೆಯಾಗಿದ್ದು ಇದೀಗ 106 ಕೆ.ಜಿ ತೂಕ ಕಡಿಮೆಯಾಗಿದೆ.
ಜೈಲಿನಲ್ಲಿ ರಾತ್ರಿ ಕಳೆದ ದರ್ಶನ್ ಗೆಳತಿ ಪವಿತ್ರ ಗೌಡ:
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರ ಗೌಡ ಅಂಡ್ ಗ್ಯಾಂಗ್ ಇಡೀ ರಾತ್ರಿ ಕಳೆದಿದ್ದಾರೆ. ಇಂದು ಬೆಳಗ್ಗೆ ಪವಿತ್ರಾ ಗೌಡಗೆ ವಿಚಾರಣಾದೀನ ಖೈದಿ ಸಂಖ್ಯೆ 6024 ಯನ್ನು ನೀಡಲಾಗಿದೆ. ರಾತ್ರಿ ಪವಿತ್ರಾ ಗೌಡ ಮಹಿಳಾ ವಿಭಾಗದ ಬ್ಯಾರಕ್ ‘ಡಿ’ಗೆ ಶಿಫ್ಟ್ ಮಾಡಲಾಗಿದೆ. ಉಳಿದ ಆರೋಪಿಗಳನ್ನು ಅಧಿಕಾರಿಗಳು ಬ್ಯಾರಕ್ ‘ಬಿ’ ಗೆ ಶಿಫ್ಟ್ ಮಾಡಿದ್ದಾರೆ. ರಾತ್ರಿ ಎಲ್ಲ ಖೈದಿಗಳಿಗೂ ಜೈಲು ಅಧಿಕಾರಿಗಳು ಆಹಾರ ನೀಡಿದ್ದಾರೆ. ಪವಿತ್ರಾ ಗೌಡಗೆ ಪ್ರತ್ಯೇಕ ಸೆಲ್ನಲ್ಲಿ ಇಟ್ಟಿದ್ದಾರೆ. ಉಳಿದ ಆರೋಪಿಗಳಿಗೆ ಇಬ್ಬರಿಗೆ ಒಂದು ಕೊಠಡಿಯಂತೆ ನೀಡಿದ್ದಾರೆ.