ಚಿತ್ರದುರ್ಗ: ಶಿಕ್ಷಣ ಸಚಿವರು ಕಟಿಂಗ್ ಮಾಡಿಸಿಕೊಂಡು ಬರಲಿ ಎಂಬ ಬಿ.ವೈ.ವಿಜಯೇಂದ್ರ ವ್ಯಂಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ನನ್ನ ಹೇರ್ ಕಟ್ ಮಾಡೋರು ಫ್ರೀ ಇಲ್ಲ. ವಿಜಯೇಂದ್ರ ಫ್ರೀ ಇದ್ರೆ ಬಂದು ಹೇರ್ ಕಟ್ಟಿಂಗ್ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ. ಇನ್ನು BJP ಪಕ್ಷದ ಅಧ್ಯಕ್ಷರಾಗಿ ಚಿತ್ರರಂಗದ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದರು.
ಇದನ್ನೂ ಓದಿ: ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವದಲ್ಲಿ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ನೆಹರೂ: ಸಿಎಂ
ಜೂನ್ 4ರಂದು ಅವರ ಹಣೆ ಬರಹ ಅವರು ನೋಡಿಕೊಳ್ಳಲಿ. ನನ್ನ ಹಣೆ ಬರಹ ನಾವು ನೋಡಿಕೊಳ್ತೇವೆ. ಇಷ್ಟು ವರ್ಷ ಅವರು ಹೊಲಸು ಮಾಡಿದ್ದನ್ನ ನಾವು ಸರಿ ಮಾಡುತ್ತಿದ್ದೇವೆ. ಪಠ್ಯ ಪುಸ್ತಕ ಪರಿಷ್ಕರಣೆ ಪ್ರಣಾಳಿಕೆಯಲ್ಲು ಹಾಕಿದ್ದೇವೆ. ಇವರ ಹಣೆ ಬರಹಕ್ಕೆ ಶಿಕ್ಷಕರ ನೇಮಕಾತಿ ಮಾಡಲು ಆಗಿಲ್ಲ. ನಾವು ಬಂದ ಬಳಿಕ ನೇಮಕಾತಿ ಮಾಡಿದ್ದೇವೆ. ಶಿಕ್ಷಣದ ಪವಿತ್ರತೆ ಕೂಡಾ ಕಾಂಗ್ರೆಸ್ ಪಕ್ಷ ಕಾಪಾಡಿದೆ. ಮಕ್ಕಳ ಹಿತ ದೃಷ್ಟಿಯಿಂದ ಕೆಲ ನಿರ್ಧಾರ ಮಾಡಿದ್ದೇವೆ ಎಂದರು.