ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬವನ್ನ ಮುಗಿಸಿದ್ದು ಪ್ರಜ್ವಲ್ ರೇವಣ್ಣ. ಅವರ ಕುಟುಂಬದ ಕುಡಿಯೇ ಮುಗಿಸಿದ್ದು ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದ್ದಾರೆ.
ಪ್ರಜ್ವಲ್ ರಾಸಲೇಲಿ ಪ್ರಕರಣ ಕುರಿತು ಮಾತನಾಡಿರುವ ಅವರು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ಮಾಡ್ತಾರೆ. ನಾವು ಅವರ ಜೊತೆಗೆ ಇದ್ದವರು ಅಲ್ಲವೇ? ಡಿ.ಕೆ. ಶಿವಕುಮಾರ್ ವಿರುದ್ಧ ಸಾಕ್ಷಿ ಆಧಾರವಾಗಿ ದೂರು ಕೊಡಲಿ ಎಂದು ಕುಟುಕಿದ್ದಾರೆ.
ವಿಷಯ ಡೈವರ್ಟ್ ಮಾಡುವ ಪ್ರಯತ್ನವಿದು. ಯಾರೇ ಪೆನ್ಡ್ರೈವ್ ಬಿಟ್ಟಿದ್ದರು ತನಿಖೆಯಲ್ಲಿ ಸಿಲುಕಿಕೊಳ್ಳುತ್ತಾರೆ. ದೇವರಾಜೇಗೌಡ ಸುದ್ದಿಗೋಷ್ಠಿ ಮಾಡಿ ರೇವಣ್ಣರ ವಿರುದ್ಧ ಮಾತಾಡಿದ್ದ. ಆದ್ದರಿಂದ ಏನಾದರೂ ಇರಬಹುದು ಎಂದು ಮಾತನಾಡಿದ್ದಾರೆ. ಈ ಘಟನೆಗಳ ಬಗ್ಗೆ ಮಾತಾಡಿದ್ದಾರೆ, ಅದನ್ನು ಬಿಟ್ಟರೆ ಅದರಲ್ಲಿ ಏನಿದೆ? ಎಂದು ಪ್ರಶ್ನೆ ಮಾಡಿದ್ದಾರೆ.
ವಿಡಿಯೋಗಳನ್ನ ಸೀಲ್ ಮಾಡಿಕೊಂಡು ಇಟ್ಟುಕೊಂಡಿದ್ದೇನೆ ಎಂದು ದೇವರಾಜೇಗೌಡ ಹೇಳಿದ್ದ. ದೇವರಾಜೇಗೌಡ ಆಡಿಯೋದಲ್ಲಿ ಎರಡು ಕಡೆ ಮಾತಾಡಿದ್ದಾನೆ. ಅಮಿತ್ ಶಾ ಜೊತೆಗೂ ಮಾತಾಡಿದ್ದೇನೆ. ಅದು ಸಹ ಖಾಸಗಿ ವಾಹಿನಿಯಲ್ಲಿ ಬಂತು. ಪ್ರಜ್ವಲ್ ರೇವಣ್ಣ ಸದಸ್ಯತ್ವ ತೆಗೆದಿದ್ದು ದೇವರಾಜೇಗೌಡನೇ. ಡಿಸಿಎಂ ಕಡೆ ಬಂದಾಗ ಎಲ್ಲರೂ ಜೊತೆನು ಮಾತನಾಡುತ್ತಾರೆ. ನ್ಯಾಯದ ಪರವಾಗಿ ದೇವರಾಜೇಗೌಡ ಇದ್ದಾನೆ ಎಂದು ಭಾವಿಸಿದ್ದೆವು ಎಂದು ತಿಳಿಸಿದ್ದಾರೆ.