ಬೆಂಗಳೂರು : ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಗಲಾಟೆ ನಡೆದಿದ್ದು ಈ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭಟ್ಕಳ ಮೂಲದ ಗಿರಿಜಾ (30), ಕೊಲೆಯಾದ ಮಹಿಳೆ, ನವೀನ್ ಕೊಲೆ ಮಾಡಿದ ಪತಿ, ಖಾಸಗಿ ಕಂಪೆನಿಯೊಂದರಲ್ಲಿ ಕೆಲಸಮಾಡುತ್ತಿದ್ದ ನವೀನ್ ಜೊತೆ ಕಳೆದ ಎಂಟು ತಿಂಗಳ ಹಿಂದೆ ಭಟ್ಕಳ ಮೂಲದ ಗಿರಿಜಾ ಮದುವೆಯಾಗಿತ್ತು, ಕೆಲವು ತಿಂಗಳ ಹಿಂದೆ ಗಿರಿಜಾಗೆ ಗರ್ಭಪಾತವಾಗಿತ್ತು, ಇದಾದ ಬಳಿಕ ಗಿರಿಜಾ ಮತ್ತು ನವೀನ್ ಸ್ವಲ್ಪ ದಿನಗಳವರೆಗೆ ಮಗು ಮಾಡಿಕೊಳ್ಳುವುದು ಬೇಡ ಎಂದು ತೀರ್ಮಾನಿಸಿದ್ದರು.
ಇದನ್ನೂ ಓದಿ: ಸಲ್ಮಾನ್ ಖಾನ್ ಅಪಾರ್ಟ್ಮೆಂಟ್ ಮುಂದೆ ಗುಂಡಿನ ದಾಳಿ
ಇತ್ತೀಚೆಗೆ ದಂಪತಿ ನಡುವೆ ಮಗು ಮಾಡಿಕೊಳ್ಳುವ ವಿಚಾರಕ್ಕೆ ಪದೇ ಪದೇ ಜಗಳ ನಡೆಯುತ್ತಲೆ ಇತ್ತು, ಇದರಿಂದ ರೋಸಿಹೋದ ಗಂಡ ಏಪ್ರಿಲ್ 12 ರಂದು ರಾತ್ರಿ ಗಿರಿಜಾ ಮನೆಯಲ್ಲಿ ಮಲಗಿದ್ದಾಗ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಘಟನೆ ಸಂಬಂಧ ಹೆಚ್ಎಎಲ್ ಪೊಲೀಸರು ಆರೋಪಿ ನವೀನ್ ನನ್ನು ವಶಕ್ಕೆ ಪಡೆದಿದ್ದು ಕೊಲೆ ಪ್ರಕರಣ ದಾಖಲಿಸಿದ್ದಾರೆ.