Saturday, September 21, 2024

ಮಗು ಮಾಡಿಕೊಳ್ಳುವ ವಿಚಾರಕ್ಕೆ ದಂಪತಿ ನಡುವೆ ಗಲಾಟೆ: ಕೊಲೆಯಲ್ಲಿ ಅಂತ್ಯ

ಬೆಂಗಳೂರು : ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಗಲಾಟೆ ನಡೆದಿದ್ದು ಈ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಹೆಚ್​ಎಎಲ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭಟ್ಕಳ ಮೂಲದ ಗಿರಿಜಾ (30), ಕೊಲೆಯಾದ ಮಹಿಳೆ, ನವೀನ್​ ಕೊಲೆ ಮಾಡಿದ ಪತಿ, ಖಾಸಗಿ ಕಂಪೆನಿಯೊಂದರಲ್ಲಿ ಕೆಲಸಮಾಡುತ್ತಿದ್ದ ನವೀನ್​ ಜೊತೆ ಕಳೆದ ಎಂಟು ತಿಂಗಳ ಹಿಂದೆ ಭಟ್ಕಳ ಮೂಲದ ಗಿರಿಜಾ ಮದುವೆಯಾಗಿತ್ತು, ಕೆಲವು ತಿಂಗಳ ಹಿಂದೆ ಗಿರಿಜಾಗೆ ಗರ್ಭಪಾತವಾಗಿತ್ತು, ಇದಾದ ಬಳಿಕ ಗಿರಿಜಾ ಮತ್ತು ನವೀನ್​ ಸ್ವಲ್ಪ ದಿನಗಳವರೆಗೆ ಮಗು ಮಾಡಿಕೊಳ್ಳುವುದು ಬೇಡ ಎಂದು ತೀರ್ಮಾನಿಸಿದ್ದರು.

ಇದನ್ನೂ ಓದಿ: ಸಲ್ಮಾನ್​ ಖಾನ್ ಅಪಾರ್ಟ್​ಮೆಂಟ್​ ಮುಂದೆ ಗುಂಡಿನ ದಾಳಿ

ಇತ್ತೀಚೆಗೆ ದಂಪತಿ ನಡುವೆ ಮಗು ಮಾಡಿಕೊಳ್ಳುವ ವಿಚಾರಕ್ಕೆ ಪದೇ ಪದೇ ಜಗಳ ನಡೆಯುತ್ತಲೆ ಇತ್ತು, ಇದರಿಂದ ರೋಸಿಹೋದ ಗಂಡ ಏಪ್ರಿಲ್​ 12 ರಂದು ರಾತ್ರಿ ಗಿರಿಜಾ ಮನೆಯಲ್ಲಿ ಮಲಗಿದ್ದಾಗ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಘಟನೆ ಸಂಬಂಧ ಹೆಚ್​ಎಎಲ್ ಪೊಲೀಸರು ಆರೋಪಿ ನವೀನ್​ ನನ್ನು ವಶಕ್ಕೆ ಪಡೆದಿದ್ದು ಕೊಲೆ ಪ್ರಕರಣ ದಾಖಲಿಸಿದ್ದಾರೆ.​

RELATED ARTICLES

Related Articles

TRENDING ARTICLES