ಬೆಂಗಳೂರು : ಅಪ್ರಾಪ್ರ ಯುವತಿಗೆ ಮಾಜಿ ಸಿಎಂ ಬಿಎಸ್ವೈ ವಿರುದ್ದ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದ್ದು ಪೊಕ್ಸೋ ಪ್ರಕರಣ ದಾಖಲಾಗಿದೆ, ಈ ಪ್ರಕರಣ ಸಂಬಂಧ ಗೃಹ ಸಚಿವ ಜಿ.ಪರಮೇಶ್ವರ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ ಅವರು, ನೆನ್ನೆ ರಾತ್ರಿ ಒಬ್ಬ ಮಹಿಳೆ ಸದಾಶಿವ ನಗರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರ ವಿರುದ್ದ ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೋ ಪ್ರಕರಣ ದಾಖಲಿದ್ದಾರೆ, ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ: ಬಿಎಸ್ವೈ ವಿರುದ್ದ ಪೋಕ್ಸೊ ಪ್ರಕರಣ ದಾಖಲು!
ದೂರು ನೀಡಿರುವ ಮಹಿಳೆಗೆ ಮಾನಸಿಕ ಅಸ್ವಸ್ತತೆ ಇದೆ ಎಂದು ಕೆಲವರು ಹೇಳುತ್ತಿದ್ದಾರೆ, ಠಾಣೆಯಲ್ಲಿ ಕೈಬರಹದ ಪ್ರತಿ ಬದಲಿಗೆ ಟೈಪ್ ಮಾಡಿರುವ ಪ್ರತಿಯನ್ನು ನೀಡಿದ್ದಾರೆ, ಇದು ಮಾಜಿ ಮುಖ್ಯಮಂತ್ರಿಗಳ ವಿರುದ್ದ ನೀಡಿರುವ ಪ್ರಕರಣವಾಗಿದೆ. ಜೊತೆಗೆ ಒಬ್ಬ ಮಹಿಳೆ ದೂರು ನೀಡಿರುವ ಕಾರಣ ಇದೊಂದು ಸೂಕ್ಷ ಪ್ರಕರಣವಾಗಿದೆ. ತನಿಖೆ ನಡೆದು ವರದಿ ಬಂದ ನಂತರವಷ್ಟೆ ಮಾಹಿತಿ ಬಹಿರಂಗ ಪಡಿಸಲಾಗುವುದು ಎಂದರು.
ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿ ಅಗತ್ಯವಿದ್ದರೇ ಮಹಿಳೆಯ ಕುಟುಂಬಕ್ಕೆ ಪೊಲೀಸರು ರಕ್ಷಣೆ ನೀಡಲಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯೂ ಉದ್ದೇಶಪೂರ್ವಕವಾಗಿ ದೂರು ದಾಖಲಿಸಿದ್ದಾರಾ ಅಥವಾ ದುರುದ್ದೇಶ ಪೂರಕವಾಗಿದೆಯಾ ಎನ್ನುವುದರ ತನಿಖೆ ನಡೆಯಲಿದೆ. ತನಿಖೆ ನಂತರ ಆರೋಪ ಸಾಬೀತಾದರೇ ಕಾನೂನು ಪ್ರಕಾರ ಕ್ರಮಕ್ಕೆ ಸೂಚಿಸಲಾಗುವುದು ಎಂದು ಅವರ ಹೇಳಿದರು.