Friday, September 20, 2024

ಯಾವನೋ ನೀನು.. ಏನ್ ಕೇಳ್ತಿದ್ದೀಯಾ? : ನಾಸೀರ್ ಹುಸೇನ್ ದರ್ಪ

ಬೆಂಗಳೂರು : ಪಾಕಿಸ್ತಾನ್​ ಜಿಂದಾಬಾದ್ ಎಂದು ಕೂಗಿರುವ ಬಗ್ಗೆ ಪ್ರಶ್ನೆ ಮಾಡಿದ ಮಾಧ್ಯಮಗಳ ಮೇಲೆ ಕಾಂಗ್ರೆಸ್​ ನೂತನ ಸಂಸದ ಡಾ. ಸಯ್ಯದ್ ನಾಸೀರ್ ಹುಸೇನ್ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನನ್ನನ್ಯಾಕೆ ಕೇಳ್ತೀರಿ..? ಯಾರು ಕೂಗಿದ್ರೋ ಅವರನ್ನು ಹಿಡ್ಕೊಳ್ಳಿ. ಯಾವನೋ‌ ನೀನು..? ಏನು ಕೇಳ್ತಿದ್ದೀಯಾ..? ಎಂದು ಪತ್ರಕರ್ತರ ಮೇಲೂ ಗರಂ ಆಗಿದ್ದಾರೆ. ಇತ್ತ ಪಾಕಿಸ್ತಾನ್ ಜಿಂದಾಬಾದ್​ ಎಂದ ಕಾಂಗ್ರೆಸ್​ ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳಲು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಜಯಬೇರಿ ಸಾಧಿಸಿದ್ದು, ಕಾರ್ಯಕರ್ತರು ವಿಜಯ ಯಾತ್ರೆಯಲ್ಲಿ ಪಾಕಿಸ್ತಾನ್​ ಜಿಂದಾಬಾದ್ ಎಂದು ದೇಶದ್ರೋಹಿ ಘೋಷಣೆ ಕೂಗಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್​ ಮುಖಂಡ ನಾಸಿರ್​ ಹುಸೇನ್​ ವಿಜೇತರಾಗಿದ್ದಾರೆ. ಈ ಹಿನ್ನೆಲೆ ನಾಸಿರ್​ ಹುಸೇನ್​ ವಿಜಯೋತ್ಸವದಲ್ಲಿ ದೇಶದ್ರೋಹಿ ಘೋಷಣೆ ಕೂಗಿ ವಿಧಾನಸೌಧದಲ್ಲಿ ಬೆಂಬಲಿಗರು ವಿಜಯೋತ್ಸವ ಆಚರಿಸಿದ್ದಾರೆ.

ಲೋಕಸಭೆಯಲ್ಲೂ ಇದು ರಿಪೀಟ್ ಆಗುತ್ತದೆ

ಬಿಜೆಪಿ, ಜೆಡಿಎಸ್ ಮೈತ್ರಿ ವರ್ಕೌಟ್ ಆಗಿಲ್ಲ. ಎಂಎಲ್​ಸಿ ಎಲೆಕ್ಷನ್ ಬಳಿಕ ರಾಜ್ಯಸಭೆಯಲ್ಲೂ ಸೋಲಾಗಿದೆ. ಏನೇನೋ ತಂತ್ರಗಾರಿಕೆ ಮಾಡಿದ್ರು, ಆಗ್ಲಿಲ್ಲ. 25 ಜನ ಸಂಸದರು ರಾಜ್ಯಕ್ಕೆ ಏನೂ ಕೊಡುಗೆ ಕೊಟ್ಟಿಲ್ಲ. ರಾಜ್ಯಸಭೆಯಲ್ಲಿ ನಾನು ರಾಜ್ಯದ ಪರ ಧ್ವನಿ ಎತ್ತುತ್ತೇನೆ. ಲೋಕಸಭಾ ಚುನಾವಣೆಯಲ್ಲೂ ಇದು ರಿಪೀಟ್ ಆಗುತ್ತದೆ ಎಂದು ಸಯ್ಯದ್ ನಾಸೀರ್ ಹುಸೇನ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES