ಮಂಡ್ಯ : ಆಸ್ತಿ ವಿಚಾರಕ್ಕೆ ಮಗನೇ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಸುಂಡಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಂಡಳ್ಳಿ ಗ್ರಾಮದ ನಂಜಪ್ಪ ಮೃತ ವ್ಯಕ್ತಿಯಾಗಿದ್ದಾನೆ. ನಂಜಪ್ಪನ ಮಗ ಮಹದೇವ ಕೊಲೆಗೈದ ಆರೋಪಿ. ಹತ್ಯೆ ಬಳಿಕ ಆರೋಪಿ ಮಹದೇವ ಎಸ್ಕೇಪ್ ಆಗಿದ್ದಾನೆ.
ಮೃತ ನಂಜಪ್ಪ ಮಗನಿಗೆ ಆಸ್ತಿ ನೀಡದೆ, ಮಗಳ ಹೆಸರಿಗೆ ಆಸ್ತಿ ಬರೆದುಕೊಟ್ಟಿದ್ದರು. ಹೀಗಾಗಿ, ಆಸ್ತಿ ಕೊಡಲಿಲ್ಲವೆಂದು ಆಕ್ರೋಶಗೊಂಡಿದ್ದ ಮಗ ಮಹದೇವ ಇಂದು ಬೆಳಗಿನ ಜಾವ ರಸ್ತೆಯಲ್ಲಿ ಒಡಾಡಿಸಿಕೊಂಡು ಕೊಲೆ ಮಾಡಿದ್ದಾನೆ. ಅಡ್ಡ ಬಂದ ತಾಯಿ ಮಹದೇವಮ್ಮಳಿಗೆ ಸಣ್ಣಪಟ್ಟ ಗಾಯವಾಗಿದೆ.
ಘಟನೆ ಬಗ್ಗ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರು ಆರೋಪಿ ಮಹದೇವಪ್ಪ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.