Friday, September 20, 2024

ಕಾಟೇರ ಸಿನಿಮಾ ಪ್ರೆಸ್​ಮೀಟ್​ಗೆ ನಟ ದರ್ಶನ್​ ಮಾಸ್ ಎಂಟ್ರಿ

ಬೆಂಗಳೂರು : ಬರೋಬ್ಬರಿ ಎರಡು ವರ್ಷಗಳ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​. ಮಾಧ್ಯಮಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಹಾಗೂ ಅಸಹ್ಯ ಪದಬಳಕೆ ಹಿನ್ನೆಲೆ ಮೀಡಿಯಾದಿಂದ ಬ್ಯಾನ್ ಆಗಿದ್ದ ನಟ ದರ್ಶನ್. ಮಾಧ್ಯಮಗಳ ಸಪೋರ್ಟ್​ ಇಲ್ಲದೆಯೆ ಕ್ರಾಂತಿ ಸಿನಿಮಾ ರಿಲೀಸ್ ಮಾಡಿದ್ದರು. ಆದರೆ ಇದೀಗ ಮಾಧ್ಯಮಗಳ ಎಡಿಟರ್ಸ್​ ಜೊತೆ ಸಂಧಾನ ಮಾತುಕತೆ ನಡೆಸಿದ್ದಾರೆ.

ಸದ್ಯ 56ನೇ ಚಿತ್ರ ಕಾಟೇರ ಶೂಟಿಂಗ್ ಸೆಟ್​ನಲ್ಲಿ ನಟ ದರ್ಶನ ಅವರು ಪುಲ್ ಬ್ಯುಸಿಯಾಗಿದ್ದಾರೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹಾಗೂ ತರುಣ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾದಿಂದ ಇಂದು ಶೂಟಿಂಗ್ ಮುಗಿಸಿ ಮಾಧ್ಯಮಗಳ ವರದಿಗಾರರ ಜೊತೆ ಸುದ್ಧಿಗೋಷ್ಠಿ ಮೂಲಕ ಭೇಟಿ ನೀಡಿದ್ದು, ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಕ್ಯಾಮೆರಾ ಮುಂದೆ ಬಂದಿರುವ ಚಾಲೆಜಿಂಗ್ ಸ್ಟಾರ್ ದರ್ಶನ್.

ಇದನ್ನು ಓದಿ : ಸನಾತನ ಧರ್ಮ ಶಾಶ್ವತವೇ ಅಲ್ಲ : ನಟ ಚೇತನ್

ಮಾಧ್ಯಮಗಳ ಮಾತನಾಡಿದ ನಟ ದರ್ಶನ್ ಎಲ್ಲರಿಗೂ ನಮಸ್ಕಾರ ಕಾಟೇರ ಏನೂ ಅಂತ ಎಲ್ರೂ ಕೇಳ್ತಾ ಇದ್ರು, ಇದು 70ರ ದಶಕದ ಸಿನಿಮಾ ವೇದಿಕೆ ಮೇಲೆ ಎರೋ ಎಲ್ಲರಿಗೂ ಧನ್ಯವಾದ ಎಂದು ನಟ ದರ್ಶನ ಮಾತುಕತೆಯನ್ನು ಶುರು ಮಾಡಿದರು. ಬಳಿಕ ಮಾತನಾಡಿದ್ದು, ಇದು 100 ನೇ ದಿನ, ಆದ್ರೆ ನನ್ನ ಡೇಟ್ಸ್ 85 ದಿನ ಅಷ್ಟೇ ಇವತ್ತು 71 ನೇ ದಿನವಾಗಿದೆ. ಇನ್ನೂ ವಿನೋದ್ ಆಳ್ವಾ ಸರ್ ಜೊತೆ ನನಗೆ ಮೊದಲ ಸಿನಿಮಾ, ಇವರ ಸಿನಿಮಾದಲ್ಲಿ ನಾನು ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದೆ. ಆದರೆ ಈಗ ಅವರ ಸಿನಿಮಾದಲ್ಲಿ ನಟನಾಗಿದ್ದೇನೆ ಎಂದು ಹೇಳಿದರು.

ಜಗಪತಿ ಬಾಬು ಅವರು ತುಂಬಾ ಮೂಡಿಯಾಗೆ ಇರುತ್ತಾರೆ. ಆಗೇಯೇ ರಾಬರ್ಟ್​ ಅಲ್ಲಿ ಆಗಲಿ ಈ ಸಿನಿಮಾದಲ್ಲೇ ಆಗಲಿ ಮನೆಯಿಂದ ಅವರೇ ಅಡುಗೆ ಮಾಡಿಸಿ ತರುತ್ತಿದ್ದರು. ಎಲ್ಲರ ಮಧ್ಯೆ ಒಳ್ಳೇಯ ಬಾಂದವ್ಯ ಇತ್ತು, ಡೈರೆಕ್ಟರ್ ಹೇಳಿದಂತೆ ಸ್ಫೇಸ್ ಬಗ್ಗೆ ನಾ ಯಾಕೆ ಮಾತನಾಡಲಿ?. ಇನ್ನೂ ರಕ್ಷಿತಾ ಅವರ ಸಾಲಿಗೆ ಆರಾಧನಾ ನಿಲ್ಲುತ್ತಾರೆ. ಅವರ ಒನ್ ಟೇಕ್ ಆರ್ಟಿಸ್ಟ್ ಮಾಲಾಶ್ರೀ ಅವರ ಬಗ್ಗೆ ನಾವು ಮಾತಾಡೋಕೆ ಆಗುತ್ತಾ?, ಅವರ ಮುಂದೆ ಯಾರೇ ನಿಂತರೂ ಬಡಿದು ಬಾಯಿಗೆ ಹಾಕಿಕೊಳ್ಳುತ್ತಾರೆ. ಎಂದು ಮಾಧ್ಯಮಗಳ ಮುಂದೆ ನಟ ದರ್ಶನ ಮಾತನಾಡಿದರು.

RELATED ARTICLES

Related Articles

TRENDING ARTICLES