ಬೆಂಗಳೂರು : ಕೇರಳದಿಂದ ಬೆಂಗಳೂರಿಗೆ ಬಂದು ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರಿಗೆ ಹೋರ್ಮಗಾರ್ಡ್ ಒಬ್ಬ ಲೈಂಗಿ ಕಿರುಕುಳ ನೀಡಿದ್ದು. ಘಟನೆ ಸಂಬಂಧ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂಎಸ್ ರಾಮಯ್ಯ ಕಾಲೇಜಿನಲ್ಲಿ 2ನೇ ವರ್ಷದ ಬಿಎಸ್ಸಿ ಓದುತ್ತಿದ್ದ ವಿದ್ಯಾರ್ಥಿನಿ ಮೂವರು ಸ್ನೇಹಿತೆಯರ ಜೊತೆ ರೂಂ ಮಾಡಿಕೊಂಡಿದ್ದಳು. ಜನವರಿ 25ರಂದು ಊಟ ಮಾಡಿ ಮಲಗಿಕೊಂಡಿದ್ದಾಗ ರಾತ್ರಿ ಯಾರೋ ಕದ ತಟ್ಟಿದ್ದಾರೆ ಎಂದು ಯುವತಿಯರು ಬಾಗಿಲು ತೆಗೆದಿದ್ದಾರೆ. ಈ ವೇಳೆ ಪೊಲೀಸ್ ಅಂತ ಹೇಳುವ ಹೋಮ್ ಗಾರ್ಡ್ ರಮೇಶ್ ಏಕಾಏಕಿ ರೂಂಗೆ ನುಗ್ಗಿ ಬಾಗಿಲು ಲಾಕ್ ಮಾಡಿದ್ದಾನೆ.
ಈ ವೇಳೆ ಯುವತಿ ತನ್ನ ಸ್ನೇಹಿತನಿಗ ಕರೆ ಮಾಡಿ ಪೊಲೀಸರು ಬಂದಿದ್ದಾರೆ ಎಂದು ತಿಳಿಸುತ್ತಾಳೆ. ಈ ವೇಳೆ ಆರೋಪಿ ರಮೇಶ್ ಯುವತಿಯರಿಗೆ ಹೆದರಿಸಿ ಮೊಬೈಲ್ ಕಿತ್ತುಕೊಂಡಿದ್ದಾನೆ. ಜೊತೆಗೆ ಯುವತಿ ಕೈಯಲ್ಲಿದ್ದ ಹಾವಿನ ಟ್ಯಾಟೋ ನೋಡಿ, ನನ್ನ ಹಾವು ತೋರಿಸ್ತೇನೆಂದು ಅಶ್ಲಿಲವಾಗಿ ಮಾತನಾಡಿದ್ದಾನೆ. ಯುವತಿ ಮೊಬೈಲ್ ಕರೆ ಮಾಡಿದ್ಳು ಎಂದು ಬಂದಿದ್ದ ಯುವತಿ ಸ್ನೇಹಿತನಿಗೂ ಕಿರುಕುಳ ನೀಡಿದ್ದಾನೆ. ಎಲ್ಲರನ್ನು ಮಂಡಿಕಾಲಿನಲ್ಲಿ ನಿಲ್ಲಿಸಿ ಟಾರ್ಚರ್ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಕಾರ್ ಡೋರ್ ತಗುಲಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ BMTC ಬಸ್: ಓರ್ವ ಮಹಿಳೆ ಸಾ*ವು
ತಡರಾತ್ರಿ 1.30 ಸುಮಾರಿಗೆ ಇನ್ನೊಬ್ಬ ಯುವಕ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು. ಸ್ಥಳಕ್ಕೆ ಸದಾಶಿವ ನಗರ ಪೊಲೀಸರು ಬರ್ತಿದ್ದಂತೆ ವ್ಯಕ್ತಿಯ ಬಣ್ಣ ಬಯಲಾಗಿದೆ. ರಮೇಶ್ ಕಳೆದ 6 ತಿಂಗಳಿಂದ ಕ್ರೈಂ ಬ್ರಾಂಚ್ ಅಧಿಕಾರಿ ಎಂದು ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದ್ದು. ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೋಂಗಾರ್ಡ್ ಒಬ್ಬ ನಾನು ಪೊಲೀಸರು ಅಂತ ಕಿರುಕುಳ ಕೊಡ್ತಿದ್ದ ಅನ್ನೋದು ಗೊತ್ತಾಗುತ್ತೆ
ಕಳೆದ 6 ತಿಂಗಳಿನಿಂದ ಕ್ರೈಂ ಬ್ರಾಂಚ್ ಪೊಲೀಸ್ ಅಂತ ಯುವತಿಯರಿಗೆ ಹಾಗೂ ಆಕೆ ಗೆಳೆಯರಿಗೆ ಟಾರ್ಚರ್
ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ರಮೇಶ್ ವಿರುದ್ಧ ಪ್ರಕರಣ ದಾಖಲು.


