ಬೆಂಗಳೂರು: ಕೆಲವರಿಗೆ ಡಿಕೆ ಸಹೋದರರನ್ನು ನೆನಪಿಸಿಕೊಳ್ಳದೇ ಇದ್ದರೆ ಆಗುವುದೇ ಇಲ್ಲವೆಂದು ಕೇಂದ್ರ ಸಚಿವ H.D.ಕುಮಾರಸ್ವಾಮಿ ವಿರುದ್ಧ ಮಾಜಿ ಸಂಸದ ಡಿ.ಕೆ.ಸುರೇಶ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಗಮನಿಸಿ: ಚಿನ್ನ ಪ್ರಿಯರಿಗೆ ಬಿಗ್ ಶಾಕ್; ಗರಿಷ್ಠ ಮಟ್ಟಕ್ಕೆ ಏರಿದ ಬಂಗಾರದ ಬೆಲೆ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಕುಮಾರಸ್ವಾಮಿಯೇ ಗಲಾಟೆ ಮಾಡಿಸಿರಬಹುದು. ಅವರು ಹೇಗೇ ಆರೋಪಿಸುತ್ತಿದ್ದಾರೋ ಹಾಗೇ ನಾನು ಆರೋಪಿಸಬಲ್ಲೆ. ಪ್ರತಿವಾರವೂ ಇಲ್ಲಿಗೆ ಬರುತ್ತಾರೆ ಅಲ್ಲವೇ, ಹಾಗೆ ಬಂದು ಗಲಾಟೆ ಮಾಡಿಸಿರಬಹುದು.
ಮುಸ್ಲಿಮನಾಗಿ ಹುಟ್ಟಬೇಕು ಅಂತಿದ್ದವನು ನಾನಲ್ಲ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಒಂದು ದಿನ ಒಂದು ಹೇಳಿಕೆ ಕೊಡುತ್ತಾರೆ, ಇನ್ನೊಂದು ದಿನ ಮತ್ತೊಂದು ಹೇಳಿಕೆ ನೀಡುತ್ತಾರೆ.
ಹಿಂದೆ ಗಲಭೆಗಳಾದಾಗ ಕುಮಾರಸ್ವಾಮಿ ಏನೆಲ್ಲಾ ಹೇಳಿಕೆ ಕೊಟ್ಟಿದ್ದರು ಎಂಬುದು ತಿಳಿದಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಏನೆಲ್ಲಾ ಹೇಳಿದ್ದರು ಎಂಬುದು ಗೊತ್ತಿದೆ ಎಂದು ಆಕ್ರೋಶ ಹೊರಹಾಕಿದರು.