Wednesday, September 18, 2024

ನಟ ದರ್ಶನ್​ಗೆ ಸದ್ಯಕ್ಕೆ ಸಿಗಲ್ಲ ಜಾಮೀನು; ಕಾರಣವೇನು ಗೊತ್ತಾ?

ಬೆಂಗಳೂರು: ಗೆಳತಿ ಪವಿತ್ರಾಳಿಗೆ ಮೆಸೇಜ್​ ಮಾಡಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಜೈಲು ಪಾಲಾಗಿರುವ ನಟ ದರ್ಶನ್​ಗೆ ಸದ್ಯಕ್ಕೆ ಜಾಮೀನು ಸಿಗುವುದಿಲ್ಲ. ದರ್ಶನ್​ಗೆ ಜಾಮೀನು ಸಿಗಲಿದೆ ಎಂದು ಅಭಿಮಾನಿಗಳು ಸಂತಸಗೊಂಡಿದ್ದರು. ಆದರೆ ನಿರಾಸೆಯಾಗಿದೆ.

ಗಮನಿಸಿ: ಅಕ್ಕಿ ಬೆಳೆಗಾರರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ; ಬಾಸುಮತಿ ಅಕ್ಕಿ ಮೇಲಿದ್ದ ಕನಿಷ್ಠ ರಫ್ತು ದರ ರದ್ದು

ಚಾರ್ಜ್ ಶೀಟ್​​​​ ಸಲ್ಲಿಕೆಯಾದ ಕೂಡಲೇ ಜಾಮೀನು ಸಿಕ್ಕೇ ಬಿಡ್ತು ಎಂದು ಫ್ಯಾನ್ಸ್​​ ಕುಣಿದಾಡಿದ್ದರು. ಬೇಲ್ ಸಿಕ್ಕಿದ ಬಳಿಕ ದರ್ಶನ್​​​​​​​​​​ ಮೆರವಣಿಗೆ ಮಾಡಲು ಪ್ಲಾನ್​​​​​​​​​ ಮಾಡಿಕೊಂಡಿದ್ದರು. ಪೊರ್ಕಿ ದರ್ಶನ್​​​​​ ಪೊಲೀಸ್​​​​​​​​​ ಕ ಷ್ಟಡಿ ಹೊರತುಪಡಿಸಿ ಜೈಲಿನಲ್ಲಿ ಈಗಾಗಲೇ ಮೂರು ತಿಂಗಳಿಗೂ ಹೆಚ್ಚು ಕಾಲ ಕಳೆದಿದ್ದಾನೆ.

ಡಿಜಿಟಲ್​​​​ ಎವಿಡೆನ್ಸ್​ ವರದಿಗಳು ಇನ್ನೂ ಪೊಲೀಸರ ಕೈ ಸೇರದ ಹಿನ್ನೆಲೆ ಸದ್ಯಕ್ಕೆ ನಟ ದರ್ಶನ್​ಗೆ ಜಾಮೀನು ಸಿಗುವುದಿಲ್ಲ. ಇದನ್ನ ಮನಗಂಡಿರುವ ದರ್ಶನ್​​ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿಲ್ಲ. ಸದ್ಯ ಮತ್ತಷ್ಟು ದಿನಗಳ ಕಾಲ ಜಾಮೀನು ಅರ್ಜಿ ಸಲ್ಲಿಕೆ ಸಾಧ್ಯತೆ ಕಡಿಮೆ ಇದೆ. ಕಾರಣವೆಂದರೆ, ಜಾಮೀನು ಅರ್ಜಿ ಸಲ್ಲಿಸುವ ಮುನ್ನ 3991 ಪುಟಗಳ ಚಾರ್ಜ್​ ಶೀಟ್​​ ಪರಿಶೀಲನೆ ಮಾಡಬೇಕು. ಅದರಲ್ಲಿರುವ ನ್ಯೂನ್ಯತೆಗಳನ್ನ ಹುಡುಕಿ ಅರ್ಜಿ ಸಲ್ಲಿಸಬೇಕು. ಈ ಹಿನ್ನೆಲೆ ಜಾಮೀನು ಅರ್ಜಿ ಸಲ್ಲಿಕೆ ತಡವಾಗಲಿದೆ.

RELATED ARTICLES

Related Articles

TRENDING ARTICLES