Saturday, September 21, 2024

ಮಾಜಿ ಪ್ರಧಾನಿ ಕುಟುಂಬ ಒತ್ತುವರಿ ಮಾಡಿರುವುದು ನಿಜವಾದರೆ ಕ್ರಮ- ಸಚಿವ ಕೃಷ್ಣ ಬೈರೇಗೌಡ

ಬಳ್ಳಾರಿ: ಮಾಜಿ ಪ್ರಧಾನಿ H.D.ದೇವೇಗೌಡ ಹಾಗೂ ಅವರ ಕುಟುಂಬಸ್ಥರಿಂದ ಭೂಕಬಳಿಕೆ ಬಗ್ಗೆ ಪವರ್​ ಟಿವಿ ಪ್ರಸಾರ ಮಾಡಿದ್ದ ಸ್ಫೋಟಕ ಸುದ್ದಿ ಕುರಿತು ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ನನ್ನ ಬಳಿ ಏನು ಇಲ್ಲ ಎಂದ ಮಾಜಿ ಪ್ರಧಾನಿ: ಪತ್ನಿ ಹೆಸರಲ್ಲಿ ಜಮೀನು ಪಡೆದು ಸರ್ಕಾರಕ್ಕೆ ವಂಚನೆ

ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ಕುಟುಂಬದವರಿಂದ ಸುಮಾರು 97 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಈ ಕುರಿತು ಹಿರೇಮಠ್ ಅವರು ಈಗಾಗಲೇ ಕೋರ್ಟಿನಲ್ಲಿ ಕೇಸ್​ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ಕಂದಾಯ ಇಲಾಖೆಯಿಂದ ಸಂಪೂರ್ಣ ಮಾಹಿತಿ ಪಡೆಯಲಾಗಿದೆ ಎಂದರು.

ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡ ಕುಟುಂಬದಲ್ಲಿ ಯಾರ ಯಾರ ಹೆಸರಲ್ಲಿ ಎಷ್ಟು ಜಮೀನಿದೆ ಗೊತ್ತಾ?

ಒಂದು ವೇಳೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವುದು ನಿಜವಾದರೇ ಕೋರ್ಟ್ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳುತ್ತವೆ ಎಂದು ಸ್ಪಷ್ಟಪಡಿಸಿದರು. ಎಂತಹ ಪ್ರಭಾವಿ ನಾಯಕರಾದರು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಅವರು ಹೇಳಿದರು.

 

RELATED ARTICLES

Related Articles

TRENDING ARTICLES