ಬೆಂಗಳೂರು: ಬೆಂಗಳೂರು ರೈಲ್ವೇ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ರೈಲಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಬಂಧನವಾಗಿದ್ದು ಬಂಧಿತನಿಂದ 30 ಕೆಜಿಗೂ ಅಧಿಕ ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದೆ.
ತ್ರಿಪುರದ ಅಗರ್ತಲಾ ಮೂಲದ ದೀಪನ್ ದಾಸ್ (20) ಬಂಧಿತ ಆರೋಪಿ, ಇನ್ನುಳಿದ ಇಬ್ಬರು ಆರೋಪಿಗಳಾದ ಸುಮನ್, ಬಿಸ್ವಜಿತ್ ಪರಾರಿಯಾಗಿದ್ದಾರೆ. ಬಂಧಿತನಿಂದ 32 ಕೆಜಿ, 888 ಗ್ರಾಂ ಗಾಂಜಾವನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಬೈಯಪ್ಪನಹಳ್ಳಿ ರೈಲ್ವೇ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್: ಆಟೋ ಮೀಟರ್ ದರ ಏರಿಸುವಂತೆ ಚಾಲಕರ ಒತ್ತಾಯ
ಬಂಧಿತ ದೀಪನ್ ದಾಸ್, ರೈಲ್ವೆಯಲ್ಲಿ ಬೆಡ್ ರೋಲರ್ ಆಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ, ರೈಲಿನಲ್ಲಿ ಬೆಡ್ಶೀಟ್, ತಲೆದಿಂಬು ಇತರೆ ವಸ್ತುಗಳಿಗಾಗಿ ಬೇರೆ ಕಂಪಾರ್ಟ್ಮೆಂಟ್ ಇರುತ್ತಿತ್ತು. ಈ ದಿಂಬು ಮತ್ತು ಬೆಡ್ ಶೀಟ್ಗಳಲ್ಲಿ ಗಾಂಜಾ ಇಟ್ಟು ಸಾಗಾಟ ಮಾಡುತ್ತಿದ್ದ. ಆರೋಪಿಗಳು ಅಗರ್ತಾಲ to SMVT ಎಕ್ಸ್ ಪ್ರೆಸ್ ರೈಲಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಬೆಂಗಳುರು ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ದೀಪನ್ ದಾಸ್ನನ್ನು ಬಂಧಿಸಿದ್ದಾರೆ. ದೀಪನ್ ದಾಸ್ ಸಿಕ್ಕಿಬೀಳುತ್ತಿದ್ದಂತೆ ಮತ್ತಿಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಸದ್ಯ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.