Sunday, September 29, 2024

30 ಸೆಕೆಂಡ್​ಗಳಲ್ಲಿ ಅಂಗಡಿಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾದ ಕಳ್ಳರು

ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಕೇವಲ 3೦ ಸೆಕೆಂಡ್ 6೦ ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಕತರ್ನಾಕ್​ ಕಳ್ಳರು ಎಸ್ಕೇಪ್ ಆಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಹೊರವಲಯದಲ್ಲಿರುವ ಮಾದನಾಯಕನಹಳ್ಳಿಯ ಲಕ್ಷ್ಮೀಪುರದಲ್ಲಿ ಈ ಘಟನೆ ನಡೆದಿದೆ. ಸಿನಿಮಾ ಸ್ಟೈಲ್​ನಲ್ಲಿ ಚಿನ್ನಾಭರಣ ಅಂಗಡಿ ಒಳಗೆ ಪ್ರವೇಶಿಸಿದ ಖತರ್ನಾಕ್​ ದರೋಡೆಕೋರರು ಗನ್​ ತೋರಿಸಿ ಕಳ್ಳತನ ಮಾಡಿದ್ದಾರೆ.

ಇದನ್ನೂ ಓದಿ: ತಿಹಾರ್​ ಜೈಲಿನಲ್ಲಿ ದೆಹಲಿ ಸಿಎಂ ಕೇಜ್ರಿವಾಲ್‌ ಬಂಧಿಸಿದ ಸಿಬಿಐ

ಘಟನೆಯ ಹಿನ್ನೆಲೆ?

ಲಕ್ಷ್ಮೀಪುರದಲ್ಲಿರುವ ಪದಮ್​ ಜ್ಯೂವೆಲರಿ ಶಾಪ್​ ನಲ್ಲಿ ಕಳೆದ ರಾತ್ರಿ 9.15ರ ಸುಮಾರಿನಲ್ಲಿ ಸಿನಿಮೀಯ ರೀತಿಯಲ್ಲಿ ಪ್ರವೇಶ ಮಾಡಿದ ಕಳ್ಳರು ಗನ್​ ತೋರಿಸಿ ಬೆದರಿಸಿದ್ದಾರೆ. ಇವರದಲ್ಲಿ ಒಬ್ಬ ಹೊರಗಡೆ ಬೈಕ್​ನಲ್ಲಿ ಕುಳಿತಿದ್ದರೇ ಮತ್ತೊಬ್ಬ ಗನ್​ ಹಿಡಿದು ಅಂಗಡಿಯವರನ್ನು ಹೆದರಿಸಿದ್ದಾನೆ, ಇನ್ನೊಬ್ಬ ಮಳಿಗೆಯಲ್ಲಿದ್ದ ಸುಮಾರು 55 ರಿಂದ 60 ಲಕ್ಷ ಮೌಲ್ಯದ ಸುಮಾರು 750 ಗ್ರಾಂ ಚಿನ್ನಾಭರಣಗಳನ್ನು ಕೇವಲ 30 ಸೆಕೆಂಡ್​ಗಳಲ್ಲಿ ಕದ್ದು ಪರಾರಿಯಾಗಿದ್ದಾರೆ. ಕಳ್ಳತನದ ಸಂಪೂರ್ಣ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES