ಬಾಗಲಕೋಟೆ: ಮಾಜಿ ಪ್ರಧಾನಿ ದೇವೇಗೌಡ ಕುಟುಂಬ ಮುಗಿಸಲು ಹುನ್ನಾರ ನಡೀತಿದೆ ಎಂಬ ಹೆಚ್ಡಿ ಕುಮಾರಸ್ವಾಮಿ ಮಾತಿನ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಆರ್.ಬಿ.ತಿಮ್ಮಾಪೂರ ಪ್ರತಿಕ್ರಿಯೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಮಾನಗೇಡಿ ಕೆಲಸ ಮಾಡು ಅಂತಾ ನಾವು ಹೇಳಿದ್ವಾ. ಪ್ರಜ್ವಲ್ & ಸೂರಜ್ ಆ ಕೆಲಸಾ ಮಾಡಿಲ್ಲ ಅಂತಾ ಕುಮಾರಸ್ವಾಮಿ ಯಾದರೂ ಹೇಳಲಿ. ಕಾನೂನು ಎಲ್ಲರಿಗೂ ಅಷ್ಟೆ, ದೇವೆಗೌಡರ ಮೊಮ್ಮಕ್ಕಳಿಗೂ ಅಷ್ಟೆ, ನಮ್ಮ ಮಕ್ಕಳಿಗೂ ಅಷ್ಟೆ ಎಂದು ಕಿಡಿಕಾರಿದರು.
ಇದನ್ನೂ ಓದಿ: 2 ತಿಂಗಳಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ ವಿಐಪಿಗಳು ಇವರು
ಪೊಲೀಸರು ಕಾನೂನು ಪ್ರಕಾರ ತನಿಖೆ ಮಾಡ್ತಿದ್ದಾರೆ. ಅದಕ್ಕೆ ದೇವೇಗೌಡರ ಫ್ಯಾಮಿಲಿ ಮುಗಿಸಿಬಿಡ್ತಾರೇ, ಅಂತಾ ಹೇಳೋದು ಸರಿಯಲ್ಲ. ಅದ್ರಲ್ಲಿ ಲಾಭ ಹೇಗೆ ಪಡಿಬೇಕು ಅಂತಾ ಯೋಚ್ನೆ ಮಾಡ್ತಾರೆ. ಕೇಂದ್ರ ಸಚಿವರಾಗಿ ಹೆಚ್.ಡಿ.ಕುಮಾರಸ್ವಾಮಿ ಕುಟುಂಬ ರಾಜಕಾರಣ ಮುಗಿಸಲು ಹುನ್ನಾರ ಅಂತಾ ಹೇಳಬಾರದು. ರಾಜಕೀಯ ಷಡ್ಯಂತ್ರ ಅಂತಾರೆ. ಮಾನಗೇಡಿ ಕೆಲಸ ಮಾಡಿದವ್ರನ್ನ ಬಿಟ್ರೆ ಅವ್ರ ದೃಷ್ಠಿಯಲ್ಲಿ ಸರ್ಕಾರ ಒಳ್ಳೆಯದು ಎಂದು ಕಿಡಿಕಾರಿದರು.