Saturday, September 28, 2024

ದರ್ಶನ್ ಭೇಟಿಗೆ ಪರಪ್ಪನ ಅಗ್ರಹಾರ ಜೈಲಿಗೆ ಬಂದ ನಟ ವಿನೋದ್​ ಪ್ರಭಾಕರ್​!

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್​ ಭೇಟಿಗೆ ಇಂದು ಸ್ಯಾಂಡಲ್​ವುಡ್​ ನಟ ವಿನೋದ್​ ಪ್ರಭಾಕರ್​ ಆಗಮಿಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್​ ಮತ್ತು ಕೊಲೆ ಪ್ರಕಣದ ಎ2 ಆರೋಪಿಯಾಗಿರು ನಟ ದರ್ಶನ್​ ಪೊಲೀಸ್​ ಕಸ್ಟಡಿಯಲ್ಲಿ ವಿಚಾರಣೆ ಮುಗಿಸಿ ಬಳಿಕ ಪರಪ್ಪನ ಅಗ್ರಹಾರದ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದನ್ನೂ ಓದಿ: ದರ್ಶನ್, ಭವಾನಿ, ಪ್ರಜ್ವಲ್, ಸೂರಜ್ ಫೋಟೋ ವೈರಲ್

ಈ ನಡುವೆ ಕಳೆದ ಎರಡು ದಿನಗಳಿಂದ ಆಪ್ತರು, ಕುಟುಂಬಸ್ಥರು ನಟ ದರ್ಶನ್​ ಭೇಟಿಗೆ ಆಗಮಿಸುತ್ತಿದ್ದಾರೆ, ನಟ ವಿನೋದ್​ ಪ್ರಭಾಕರ್ ಇಂದು ಮಧ್ಯಾಹ್ನ ಪರಪ್ಪನ ಅಗ್ರಹಾರದ ಬಳಿ ಸ್ನೇಹಿತರ ಜೊತೆ ಆಗಮಿಸಿದ್ದು ಚೆಕ್​ಪೋಸ್ಟ್​ ಮೂಲಕ ಒಳಗೆ ಹೋದ ಅವರು ದರ್ಶನ್​ ಭೇಟಿಗೆ ಮುಂದಾಗಿದ್ದಾರೆ. ಅವರ ಕುಟುಂಬಸ್ಥರಿಗಷ್ಟೆ ಸದ್ಯ ದರ್ಶನ್​ ಭೇಟಿಗೆ ಅವಕಾಶ ನೀಡುತ್ತಿದ್ದು ನಮಗೆ ಭೇಟಿ ಅವಕಾಶ ಇದೆಯೋ ಇಲ್ವೋ ನೋಡಬೇಕು ಎಂದು ಈ ವೇಳೆ ಮಾದ್ಯಮದವರೊಂದಿಗೆ ಪ್ರತಿಕ್ರಿಯಿಸಿದ್ದಾರೆ.​

RELATED ARTICLES

Related Articles

TRENDING ARTICLES