Saturday, September 28, 2024

ಸೂರಜ್​ ಅಸಹಜ ಲೈಂಗಿಕ ಕ್ರಿಯೆ ಪ್ರಕರಣ: ಜಿಟಿ ದೇವೇಗೌಡ ಮೊದಲ ಪ್ರತಿಕ್ರಿಯೆ

ಮೈಸೂರು: ಅಸಹಜ ಲೈಂಗಿಕ ಕ್ರಿಯೆ ಪ್ರಕಣದಲ್ಲಿ ಹೊಳೆನರಸಿಪುರ ಶಾಸಕ ಹೆಚ್​.ಡಿ ರೇವಣ್ಣ ಅವರ ಹಿರಿಯ ಮಗ ವಿಧಾನಪರಿಷತ್​ ಸದಸ್ಯ ಸೂರಜ್ ರೇವಣ್ಣ ಅವರ ಬಂಧನವಾಗಿದ್ದು, ಈ ಕುರಿತು ಜೆಡಿಎಸ್​ ಹಿರಿಯ ನಾಯಕ ಜಿಟಿ ದೇವೇಗೌಡ ಅವರು ಪ್ರತಿಕ್ರಿಯೆ ನಿಡಿದ್ದಾರೆ.

ಮೈಸೂರಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಸೂರಜ್​ ಬಂಧನದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹೋ ಏನಾಗಿದೆ, ಅವರು ಹಗರಣದಲ್ಲಿ ಸಿಕ್ರಾ!, ಹಾಗಾದ್ರೆ ಕಾದಿದೆ ಶಿಕ್ಷೆ ಬಿಡಿ, ಹೋ ಅರೆಸ್ಟ್ ಕೂಡ ಆದ್ರಾ!, ಸೂರಜ್ ರೇವಣ್ಣ ಬಂಧನದ ಬಗ್ಗೆ ನನಗೆ ಮಾಹಿತಿ ಇಲ್ಲ, ನಿನ್ನೆಯಿಂದ ನಾನು ಹಲವು ಕಾರ್ಯಕ್ರಮಗಳಲ್ಲಿ ಬಿಸಿ ಇದೆ. ಬೆಳಗ್ಗೆ ಪತ್ರಿಕೆ, ಟಿ.ವಿ ನೋಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈ‌ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದರು.

ಇದನ್ನೂ ಓದಿ: Power TV Impact: ಸಲಿಂಗ ಪ್ರಕರಣ​​​; ಡಾ.ಸೂರಜ್‌ ರೇವಣ್ಣ ಅರೆಸ್ಟ್​​​​​

ಪ್ರಜ್ವಲ್ ರೇವಣ್ಣ ವಿಚಾರದಲ್ಲೂ ನಮ್ಮ ಹಸ್ತಕ್ಷೇಪ ಇರಲಿಲ್ಲ. ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ. ತಪ್ಪು ಮಾಡಿದವರ ಪರ ನಾವು ಯಾವುತ್ತು ನಿಲ್ಲಲ್ಲ. ನನ್ನ ಮಗನೇ ಇರಲಿ, ನನ್ನ ಸಂಬಂಧಿಗಳೇ ಇರಲಿ ಯಾರೇ ತಪ್ಪು ಮಾಡಿದ್ರು ತಪ್ಪೆ. ಜನತದಾಳ ಯಾವತ್ತು ತಪ್ಪು ಮಾಡಿದವರ ಪರ ನಿಲಲ್ಲ. ಸೂರಜ್ ರೇವಣ್ಣ ಬಂಧನದಿಂದ ಪಕ್ಷಕ್ಕೆ ಯಾಕೇ ಮುಜುಗರ. ರಾಜ್ಯದಲ್ಲಿ ಯಾರೋ ಒಬ್ಬ ತಪ್ಪು ಮಾಡಿದರೇ ಅದು ಆರುವರೆ ಕೋಟಿ ಜನ ಕಾರಣರಾ, ಅಲ್ಲ ತಾನೇ ಇದು ಕೂಡ ಹಾಗೇ ಎಂದರು.

ಸೂರಜ್ ವಿರುದ್ಧ ಕ್ರಮದ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು. ಪಕ್ಷದೊಳಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು.

RELATED ARTICLES

Related Articles

TRENDING ARTICLES