Saturday, September 28, 2024

ಮದುವೆ ಫೋಟೋಶೂಟ್ ವೇಳೆ ಮೊಸಳೆ ಪ್ರತ್ಯಕ್ಷ!

ಆನೇಕಲ್: ಕೆರೆಯ ಬಳಿ ಮದುವೆ ಫೋಟೋಶೂಟ್​ಗೆಂದು ಹೋಗಿದ್ದ ವೇಳೆ ಬೃಹತ್​ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿ ಜನರನ್ನು ಭಯಭೀತರನ್ನಾಗಿಸಿದ ಘಟನೆ ಆನೇಕಲ್​ ತಾಲೂಕಿನ ಬನ್ನೇರುಘಟ್ಟ ಸಮೀಪದ ರಾಗಿಹಳ್ಳಿಯಲ್ಲಿ ನಡೆದಿದೆ.

ರಾಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತರಾಯನ ಕೆರೆಯಲ್ಲಿ ಈ ಹಿಂದೆಯೂ ದನ, ಕುರಿ ಮತ್ತು ಮೇಕೆಗಳು ಬಾಯಾರಿಕೆಗೆ ನೀರು ಕುಡಿಯಲು ಹೋದಾಗ ಮೊಸಳೆ ದಾಳಿ ಮಾಡಿರುವ ಮಾತುಗಳು ಕೇಳಿ ಬಂದಿದೆ. ಇನ್ನು, ಈ ಕೆರೆಯ ಬಳಿ ಮುತ್ತುರಾಯಸ್ವಾಮಿ ದೇವಾಲಯವಿದ್ದು ನಿತ್ಯ ನೂರಾರು ಭಕ್ತರು ಇಲ್ಲಿಗೆ ಬರುವುದುಂಟು, ಇದೀಗ ಇಲ್ಲಿ ಮೊಸಳೇ ಇರುವ ವಿಚಾರ ತಿಳಿದು ಜನ ಆತಂಕಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: Power TV Impact: ಸಲಿಂಗ ಪ್ರಕರಣ​​​; ಡಾ.ಸೂರಜ್‌ ರೇವಣ್ಣ ಅರೆಸ್ಟ್​​​​​

ಈ ಕುರಿತು ಹಲವು ಬಾರಿ ಅರಣ್ಯ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು ಆದರೇ, ಯಾವುದೇ ಕ್ರಮ ಕೈಗೊಂಡಿಲ್ಲ. ಕಂಡು ಕಾಣದ ರೀತಿಯಲ್ಲಿರುವ ಅರಣ್ಯ ಅಧಿಕಾರಿಗಳು ವರ್ತಿಸುತ್ತಿದ್ದು ಅಧಿಕಾರಿಗಳ ಈ ನಡೆಗೆ
ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

RELATED ARTICLES

Related Articles

TRENDING ARTICLES