ಬೆಂಗಳೂರು: ಬೆಂಗಳೂರಿನ ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಸತತ 2 ಗಂಟೆಗಳ ಕಾಲ ಪೊಲೀಸರು ಸ್ಥಳ ಮಹಜರು ನಡೆಸಿದರು. ಬಂಧಿತರಾದ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಆರೋಪಿಗಳನ್ನ ಕರೆತಂದು ಪೊಲೀಸರು ಹಲವಾರು ಮಹತ್ತರ ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ.
ಈ ವೇಳೆ ಎಲ್ಲಾ ಆರೋಪಿಗಳ ಮಧ್ಯೆ ದರ್ಶನ್ ಒಂದೂವರೆ ಗಂಟೆಗೂ ಹೆಚ್ಚು ಕಾಲ ಕೈಕಟ್ಟಿ ನಿಂತಿದ್ದು, ಎಲ್ಲಾ ಆರೋಪಿಗಳ ಬಳಿಯೂ ಪೊಲೀಸರು ಕೃತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಇನ್ನೂ, ಸ್ಥಳ ಮಹಜರು ವೇಳೆ ಶೆಡ್ನಲ್ಲಿ FSL ಟೀಮ್ ಕೂಡ ಉಪಸ್ಥಿತಿಯಿದ್ದು, ಆರೋಪಿಗಳ ಹೇಳಿಕೆ ಆಧರಿಸಿ FSL ತಂಡದ ಪರಿಶೀಲನೆ ನಡೆಸಿದರು. ಬಳಿಕ ಆರೋಪಿಗಳು ಬಳಸಿದ್ದ ಮಾರಕಾಸ್ತ್ರಗಳ ಟೆಕ್ನಿಕಲ್ ಎವಿಡೆನ್ಸ್ ಪಡೆದ ಪೊಲೀಸರು ಮಾರಕಾಸ್ತ್ರಗಳ ಮೇಲಿನ ಫಿಂಗರ್ ಪ್ರಿಂಟ್ ಸೇರಿ ಎಲ್ಲಾ ಸಾಕ್ಷ್ಯಗಳನ್ನ ಸಂಗ್ರಹಿಸಿದರು.
ಇದನ್ನೂ ಓದಿ:ನಟ ದರ್ಶನ್, ಪವಿತ್ರಾ ಗೌಡರನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ
ಶೆಡ್ನ ಹಲ್ಲೆ ನಡೆಸಿದ ಸ್ಥಳದಲ್ಲಿದ್ದ ರಕ್ತದ ಕಲೆಗಳ ಸ್ಯಾಂಪಲ್ ಸಂಗ್ರಹಿಸಿ, ಎಲ್ಲಾ ಆಯಾಮಗಳಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇನ್ನು, ಸ್ಥಳ ಮಹಜರು ಬಳಿಕ ದರ್ಶನ್ ಹಾಗೂ ಆರೋಪಿಗಳನ್ನ ಪೊಲೀಸರು ಜೈಲಿಗೆ ಕರೆದೊಯ್ದರು.
ಇಂದು ಚಿತ್ರದುರ್ಗದಲ್ಲೂ ಸ್ಥಳ ಮಹಜರು ಸಾಧ್ಯತೆ:
ದರ್ಶನ್ ಮತ್ತು ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು ಆರೋಪಿಗಳನ್ನ ಸ್ಥಳ ಮಹಜರಿಗೆ ಚಿತ್ರದುರ್ಗಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ.
ಕಳೆದ ಎಂಟನೇ ತಾರೀಖು ರೇಣುಕಾಸ್ವಾಮಿಯನ್ನ ಕಿಡ್ನಾಪ್ ನಡೆದಿತ್ತು. ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿಕೊಂಡು ಬೆಂಗಳೂರಿಗೆ ಕರೆ ತಂದು ಪಟ್ಟಣಗೆರೆಯ ಶೆಡ್ ನಲ್ಲಿ ಕೂಡಿ ಹಾಕಿ ಹಲ್ಲೆ ನಿನ್ನೆ ಬೆಂಗಳೂರಿನಲ್ಲಿ ಪೊಲೀಸರು ಸ್ಥಳ ಮಹಜರು ಪ್ರಕ್ರಿಯೆ ಮುಗಿಸಿದ್ದಾರೆ. ಇಂದು ಚಿತ್ರದುರ್ಗದಲ್ಲೂ ಸ್ಥಳ ಮಹಜರು ನಡೆಸಲು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ.
ಇಂದು ಖಾಕಿ ಕೈ ಸೇರಲಿದೆ ಪೋಸ್ಟ್ ಮಾರ್ಟಂ ರಿಪೋರ್ಟ್:
ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಇಂದು ಪೋಸ್ಟ್ ಮಾರ್ಟಂ ರಿಪೋರ್ಟ್ ಪೊಲೀಸರ ಕೈ ಸೇರಲಿದೆ. ಹತ್ಯೆ ಪ್ರಕರಣಕ್ಕೆ ಪೋಸ್ಟ್ ಮಾರ್ಟಂ ವರದಿ ಸಾಕ್ಷಿಯಾಗಲಿದೆ. ರೇಣುಕಾ ಸ್ವಾಮಿ ದೇಹದಲ್ಲಿ 15 ಕಡೆಗಳಲ್ಲಿ ಗಾಯದ ಗುರುತು ಕಂಡುಬಂದಿದೆ. ಮರ್ಮಾಂಗದ ಮೇಲೆ ಹಲ್ಲೆ ಮಾಡಿರೋದು ರಿಪೋರ್ಟ್ನಲ್ಲಿ ದೃಢವಾಗಿದೆ. ರೇಣುಕಾ ಸ್ವಾಮಿ ದೇಹಕ್ಕೆ ಆಘಾತವಾಗಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದ. ಮರ್ಮಾಂಗದಿಂದ ರಕ್ತ ಸೋರಿಕೆಯಾಗಿರೋದು ಕೂಡ ದೃಢವಾಗಿದೆ.