Sunday, September 29, 2024

ನಾವು ಕಾನೂನು ಹೋರಾಟ ಮುಂದುವರೆಸುತ್ತೇವೆ: ಪ್ರಜ್ವಲ್​ ಪರ ವಕೀಲ ಅರುಣ್​

ಬೆಂಗಳೂರು: ಪ್ರಜ್ವಲ್​ ರೇವಣ್ಣ ಎಸ್ಐಟಿ ತನಿಖೆಗೆ ಸ್ಪಂದಿಸುತ್ತಾರೆ ಎಂದು ಅವರ ಪರ ವಕೀಲ ಅರುಣ್ ಹೇಳಿಕೆ ನೀಡಿದ್ದಾರೆ.

ಪ್ರಜ್ವಲ್​ ರೇವಣ್ಣ ಭೇಟಿ ಮಾಡಿಬಂದ ಬಳಿಕ ವಕೀಲ ಅರುಣ್​ ಮಾದ್ಯಮದವರೊಂದಿಗೆ ಮಾತನಾಡಿ, ಪ್ರಜ್ವಲ್​ ವಿರುದ್ದ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಬಂಧನಮಾಡಲಾಗಿದೆ. ಈ ಬಗ್ಗೆ ಮೀಡಿಯಾದಲ್ಲಿ ನೆಗೆಟಿವ್ ಕ್ಯಾಂಪೆನ್ ಬೇಡ. ನಾವು ಕೋರ್ಟ್ ನಲ್ಲಿ ಕಾನೂನು ಹೋರಾಟ ಮುಂದುವರೆಸುತ್ತೇವೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗುತ್ತೆ. ನಂತರ ರೆಗ್ಯುಲರ್ ಬೇಲ್ ಗೆ ಅರ್ಜಿ ಹಾಕ್ತೀವಿ ಎಂದು ವಕೀಲ ಅರುಣ್ ಹೇಳಿದ್ದಾರೆ.

ಇದನ್ನೂ ಓದಿ: ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಜ್ವಲ್​: ವಶಕ್ಕೆ ಪಡೆದ SIT ತಂಡ

ರಾತ್ರಿ ಬಂದಿದ್ದೀನಿ, ಇಲ್ಲಿದ್ದೀನಿ. ತನಿಖೆಗೆ ಸಹಕಾರ ಕೊಟ್ಟಿದ್ದೀನಿ. ನಾನು ಸ್ವಯಂ ಪ್ರೇರಿತವಾಗಿಯೇ ಬಂದಿದ್ದೀನಿ ಎಂದು ಪ್ರಜ್ವಲ್​ ರೇವಣ್ಣ ಹೇಳಿದ್ದಾರೆ ಎಂದು ಅರುಣ್ ಹೇಳಿದ್ದಾರೆ. ಬೇಲ್ ಅಪ್ಲಿಕೇಶನ್ ಪೆಂಡಿಂಗ್ ಇದೆ. ಅದರ ಬಗ್ಗೆ ಮಾತಾಡಲ್ಲ‌. ತನಿಖೆಗೆ ಸಹಕಾರ ಕೊಡ್ತಾರೆ ಎಂದು ಪ್ರಜ್ವಲ್ ಪರ ವಕೀಲ ಅರುಣ್ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES