ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿ ಮಾದ್ಯಮ ಪ್ರತಿಕ್ರಿಯೆ ನೀಡುವ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ನಲ್ಲಿರೋರು ತಲೆ ಹಿಡುಕರು ಎಂಬ ಪದ ಬಳಕೆ ಸಂಬಂಧ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಮುಗಿಸಿ ಬಳಿಕ ಮಾದ್ಯಮದವರೊಂದಿಗೆ ಅವರು ಮಾತನಾಡಿದರು.
ಇದನ್ನೂ ಓದಿ: ಪೆನ್ಡ್ರೈವ್ ಪ್ರಕರಣ: ಪ್ರಜ್ವಲ್ ರೇವಣ್ಣ ಅಜ್ಞಾತವಾಸಕ್ಕೆ 1 ತಿಂಗಳು
ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಮಾದ್ಯಮ ಪ್ರತಿಕ್ರಿಯೆ ನೀಡುವ ವೇಳೆ ಕಾಂಗ್ರೆಸ್ ನಲ್ಲಿರೋರು ತಲೆ ಹಿಡುಕರು ಎಂಬ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ್ದಾರೆ ಎಂಬ ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನಲ್ಲಿರೋರು ತಲೆ ಹಿಡಿತಾರೋ ಏನ್ಮಾಡ್ತಾರೋ ಆ ಬಗ್ಗೆ ನಾನೀಗ ಮಾತನಾಡಲು ಹೋಗುವುದಿಲ್ಲ, ಆ ಮಾಹಿತಿಯನ್ನು ಮೊದಲು ತಿಳ್ಕೊಂಡು, ತಗೊಂಡು, ನನ್ನ ಕಣ್ಣಲ್ಲಿ ನೋಡಿ, ಕಿವಿಯಲ್ಲಿ ಕೇಳಿ ಆಮೇಲೆ ಮಾತಾಡ್ತೀನಿ ಎಂದು ಹೇಳಿದರು.