ತುಮಕೂರು : ರೈತರಿಗೆ ಒಂದು ವಿಷದ ಬಾಟಲಿ ಕೊಡಿ, ನಾವೆಲ್ಲಾ ವಿಷ ಕುಡಿದು ಸತ್ತು ಹೋಗ್ತಿವಿ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಾಸಕ ಮಸಾಲಾ ಜಯರಾಂ ವಾಗ್ದಾಳಿ ನಡೆಸಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಡಿ. ರಾಂಪುರ ಗ್ರಾಮದಲ್ಲಿ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ವಿರೋಧಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ.
ಸಿಎಂ ಸಿದ್ರಾಮಣ್ಣನವರಿಗೆ ನಾನು ಒಂದು ಕೇಳೋಕೆ ಬಯಸ್ತೀನಿ. ನೀವು ಎಲ್ಲಾ ಭಾಗ್ಯ ಕೊಟ್ಟಿದ್ದೀರಿ. ರೈತ ಬಾಂಧವರಿಗೆ ಒಂದೊಂದು ವಿಷದ ಬಾಟಲಿ ಕೊಟ್ಟುಬಿಡಿ. ನಾವೆಲ್ಲಾ (ರೈತರು) ವಿಷ ಕುಡಿದು ಸತ್ತು ಹೋಗ್ತಿವಿ ಎಂದು ಕಿಡಿಕಾರಿದ್ದಾರೆ.
ಅವತ್ತು ಹೇಮಾವತಿ ಇಇ ನೋಟಿಸ್ ಕೊಟ್ಟಿದ್ಯಲ್ಲ. ಇವತ್ತು ಇಲ್ಲಿ ಬಂದು ನೋಡು. ನಿನ್ನ ತಿಥಿ ಊಟಕ್ಕೆ ರೆಡಿ ಮಾಡಿ ಇಟ್ಟಿದ್ದೀವಿ, ನಿನ್ನ ತಿಥಿ ಮಾಡ್ತೀವಿ. ಪ್ರತಿ ಊರು ಊರಿನವರು ಎಚ್ಚೆತ್ತುಕೊಳ್ಳಬೇಕು. ಪ್ರತಿ ಊರಿನಲ್ಲಿ ಒಂದು ಕಾವಲು ಸಮಿತಿ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಜೆಸಿಬಿ ಬಂದ್ರೆ ಬೆಂಕಿ ಹಾಕಿ ಸುಟ್ಟಾಕಿ
ನಿಮ್ಮ ಊರಿಗೆ ಏನಾದರೂ ಜೆಸಿಬಿ ಬಂದ್ರೆ ಅವತ್ತೇ ಜೆಸಿಬಿಗೆ ಬೆಂಕಿ ಹಾಕಿ ಸುಟ್ಟಾಕಿ. ಮುಂದೆ ಏನಾದರೂ ನಾವು ಬರುತ್ತೇವೆ. ಬಿಜೆಪಿ ವಿರುದ್ಧ ಚೊಂಬು ಅಂತ ಜಾಹಿರಾತು ಕೊಟ್ಟಿದ್ರಲ್ಲ. ಈಗ ತುಮಕೂರಿನ ಜನರಿಗೆ ನೀವು ಚೊಂಬು ಕೊಡ್ತಿದ್ದೀರಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಸಾಲಾ ಜಯರಾಂ ಆಕ್ರೋಶ ಹೊರಹಾಲಿದ್ದಾರೆ.