ಬೆಂಗಳೂರು: ಪ್ರಜ್ವಲ್ ರೇವಣ್ಣ ರಾಸಲೀಲೆ ಪೆನ್ಡ್ರೈವ್ ಪ್ರಕರಣದಲ್ಲಿ ತಪ್ಪು ಮಾಡಿದವರು ಕಾನೂನಿಗೆ ತಲೆಬಾಗಲೇ ಬೇಕು ಈ ವಿಚಾರದಲ್ಲಿ ನನ್ನ ಹೆಸರು ಹಾಗು ದೇವೇಗೌಡರ ಹೆಸರು ತರಬೇಡಿ ಎಂದು ಮಾಜಿ ಮೂಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪೆನ್ ಡ್ರೈವ್ ಪ್ರಕರಣ ಮೂರು ದಿನಗಳಿಂದ ಚರ್ಚೆಯಾಗುತ್ತಿದೆ, ಪೆನ್ ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ತಪ್ಪು ಮಾಡಿದ್ರೆ ಶಿಕ್ಷೆ ಅನಿಭವಿಸಬೇಕು, ಇದರ ಮಧ್ಯೆ ಕುಟುಂಬವನ್ನು ತರೋದು ಬೇಡ ಇದು ವ್ಯಕ್ತಿಯ ಪ್ರಶ್ನೆ ವ್ಯಕ್ತಿಯನ್ನು ಪ್ರಶ್ನೆ ಮಾಡಿ ತಪ್ಪಿ ಮಾಡಿದ್ರೆ ಶಿಕ್ಷೆ ಅನುಭವಿಸುತ್ತಾನೆ ಇದನ್ನು ವಹಿಸಿಕೊಂಡು ಬರುವ ಪ್ರಶ್ನೆಯೇ ಇಲ್ಲ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ: ತಪ್ಪು ಮಾಡಿದವರು ನೀರು ಕುಡಿಯಲೇ ಬೇಕು-HDK
ಇನ್ನು ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ಹಾಕಿದ್ದಾರೆ, ತನಿಖೆಯಲ್ಲಿ ಸತ್ಯಾಂಶ ಹೊರಬರಲಿದೆ, ಪ್ರಜ್ವಲ್ ಎಲ್ಲಿದ್ದಾನೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಿಗೆ ಹೋಗ್ತಾನೆ ಅಂಥ ನನ್ನ ಕೇಳಿ ಹೋಗ್ತಾನ? ದಿನಾ ನನ್ನ ಕೇಳಿ ಓಡಾಡ್ತಾನಾ? ಈ ವಿಚಾರ ನನ್ನ ಗಮನಕ್ಕೆ ಮುಂಚೆಯೇ ಬಂದಿದ್ದರೇ ಸರಿ ಪರಿಸಬಹುದಾಗಿತ್ತು ಎಂದರು.
ಈ ವಿಚಾರಕ್ಕೆ ಸಂಬಂಧಿಸಿ ಪಕ್ಷದಿಂದ ಕ್ರಮ ಕೈಗೊಳ್ಳುತ್ತೇನೆ, ಎಸ್ಐಟಿ ತನಿಖೆ ಸತ್ಯಾಂಶ ಹೊರಬರಲಿ, ಪೆನ್ಡ್ರೈವ್ ಯಾರು ಬಿಟ್ಟಿದ್ದಾರೆ ಎಂಬ ಸತ್ಯ ಹೊರಬರಲಿ, ಇನ್ನು ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಅಂತಾ ಈಗಾಗಲೇ ಹೇಳಿದ್ದೇನೆ, ಮಹಳೆಯರಿಗೆ ದೇವೇಗೌಡರು ಹಾಗು ನಾನು ಗೌರವದಿಂದ ನಡೆದುಕೊಂಡಿದ್ದೇವೆ ಎಂದು ಅವರು ಹೇಳಿದರು.