Friday, May 17, 2024

ಪ್ರಜ್ವಲ್​ ಅಶ್ಲೀಲ ವೀಡಿಯೋ ಪ್ರಕರಣ: ನನ್ನ ಹಾಗು ದೇವೇಗೌಡರ ಹೆಸರು ತರಬೇಡಿ ಎಂದ ಮಾಜಿ ಸಿಎಂ

ಬೆಂಗಳೂರು: ಪ್ರಜ್ವಲ್​ ರೇವಣ್ಣ ರಾಸಲೀಲೆ ಪೆನ್​ಡ್ರೈವ್​ ಪ್ರಕರಣದಲ್ಲಿ ತಪ್ಪು ಮಾಡಿದವರು ಕಾನೂನಿಗೆ ತಲೆಬಾಗಲೇ ಬೇಕು ಈ ವಿಚಾರದಲ್ಲಿ ನನ್ನ ಹೆಸರು ಹಾಗು ದೇವೇಗೌಡರ ಹೆಸರು ತರಬೇಡಿ ಎಂದು ಮಾಜಿ ಮೂಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಪೆನ್ ಡ್ರೈವ್​ ಪ್ರಕರಣ ಮೂರು ದಿನಗಳಿಂದ ಚರ್ಚೆಯಾಗುತ್ತಿದೆ, ಪೆನ್​ ಡ್ರೈವ್​ ಪ್ರಕರಣದಲ್ಲಿ ಪ್ರಜ್ವಲ್ ತಪ್ಪು ಮಾಡಿದ್ರೆ ಶಿಕ್ಷೆ ಅನಿಭವಿಸಬೇಕು, ಇದರ ಮಧ್ಯೆ ಕುಟುಂಬವನ್ನು ತರೋದು ಬೇಡ ಇದು ವ್ಯಕ್ತಿಯ ಪ್ರಶ್ನೆ ವ್ಯಕ್ತಿಯನ್ನು ಪ್ರಶ್ನೆ ಮಾಡಿ ತಪ್ಪಿ ಮಾಡಿದ್ರೆ ಶಿಕ್ಷೆ ಅನುಭವಿಸುತ್ತಾನೆ ಇದನ್ನು ವಹಿಸಿಕೊಂಡು ಬರುವ ಪ್ರಶ್ನೆಯೇ ಇಲ್ಲ.

ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ: ತಪ್ಪು ಮಾಡಿದವರು ನೀರು ಕುಡಿಯಲೇ ಬೇಕು-HDK

ಇನ್ನು ಪ್ರಕರಣಕ್ಕೆ ಸಂಬಂಧಿಸಿ  ಎಫ್​ಐಆರ್​ ಹಾಕಿದ್ದಾರೆ, ತನಿಖೆಯಲ್ಲಿ ಸತ್ಯಾಂಶ ಹೊರಬರಲಿದೆ, ಪ್ರಜ್ವಲ್​ ಎಲ್ಲಿದ್ದಾನೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಿಗೆ ಹೋಗ್ತಾನೆ ಅಂಥ ನನ್ನ ಕೇಳಿ ಹೋಗ್ತಾನ? ದಿನಾ ನನ್ನ ಕೇಳಿ ಓಡಾಡ್ತಾನಾ? ಈ ವಿಚಾರ ನನ್ನ ಗಮನಕ್ಕೆ ಮುಂಚೆಯೇ ಬಂದಿದ್ದರೇ ಸರಿ ಪರಿಸಬಹುದಾಗಿತ್ತು ಎಂದರು.

ಈ ವಿಚಾರಕ್ಕೆ ಸಂಬಂಧಿಸಿ ಪಕ್ಷದಿಂದ ಕ್ರಮ ಕೈಗೊಳ್ಳುತ್ತೇನೆ, ಎಸ್​ಐಟಿ ತನಿಖೆ ಸತ್ಯಾಂಶ ಹೊರಬರಲಿ, ಪೆನ್​ಡ್ರೈವ್​ ಯಾರು ಬಿಟ್ಟಿದ್ದಾರೆ ಎಂಬ ಸತ್ಯ ಹೊರಬರಲಿ, ಇನ್ನು ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಅಂತಾ ಈಗಾಗಲೇ ಹೇಳಿದ್ದೇನೆ, ಮಹಳೆಯರಿಗೆ ದೇವೇಗೌಡರು ಹಾಗು ನಾನು ಗೌರವದಿಂದ ನಡೆದುಕೊಂಡಿದ್ದೇವೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES