ತೀರ್ಥಹಳ್ಳಿ: ನಮ್ಮ ರಕ್ತ ದಲ್ಲಿ ಹಿಂದುತ್ವ ಹರಿಯುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಕೆಎಸ್ ಈಶ್ವರಪ್ಪನಿಗೆ ಟಾಂಗ್ ಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈಶ್ವರಪ್ಪನವರ ಬಗ್ಗೆ ಗೌರವ ಇದೆ.ಇದೇ ಈಶ್ವರಪ್ಪ ನವರು ಕಳೆದ ವಾರದ ಹಿಂದೆ ರಾಘವೇಂದ್ರ 5 ಲಕ್ಷ ಲೀಡ್ ನಲ್ಲಿ ಗೆಲ್ಲಿಸಬೇಕು ಎಂದಿದ್ದರು.ಎರಡು ವಾರದಲ್ಲಿ ಅವರ ಮನಸ್ಸು ಯಾಕೇ ಇಷ್ಟು ಹದಗೆಟ್ಟಿದೆ ಗೊತ್ತಿಲ್ಲ.ಯಡಿಯೂರಪ್ಪ ಕುಟುಂಬದ ಬಗ್ಗೆ ಚಂದ್ರ,ಸೂರ್ಯ ಎಂದು ಹೊಲಿಸಿ ಹಾರೈಸಿದ್ದರು.ಹಿಂದೂತ್ವದ ಬಗ್ಗೆ ಇನ್ನೊಬ್ಬರಿಂದ ಕಲಿಯುವ ಅವಶ್ಯಕತೆ ಇಲ್ಲ.ಪ್ರಚಾರಕ್ಕಾಗಿ ಹಿಂದೂತ್ವ ಅಲ್ಲ
ನಮ್ಮ ರಕ್ತ ದಲ್ಲಿ ಹಿಂದುತ್ವ ಹರಿಯುತ್ತಿದೆ ಎಂದು ಈಶ್ವರಪ್ಪನಿಗೆ ಟಾಂಗ್ ಕೊಟ್ಟಿದ್ದರು.
ಇದನ್ನೂ ಓದಿ: Power TV Survey : ಕೊಪ್ಪಳ ಕ್ಷೇತ್ರದಲ್ಲಿ ಯಾರಿಗೆ ಜಯ? ಯಾರಿಗೆ ಸೋಲು?
ವಿರೋಧ ಪಕ್ಷಗಳು ಟೀಕೆ ಮಾಡುವುದೇ ಪ್ರಚಾರ ಅಂದುಕೊಂಡಿದ್ದಾರೆ.ಯತೀಂದ್ರ ಅವರು ಅಮಿತ್ ಷಾ ಅವರಿಗೆ ಗೂಂಡಾ ಎಂದಿದ್ದಾರೆ.ಇವರಿಗೆ ನಾಚಿಕೆ ಆಗಬೇಕು. ಮುಖ್ಯಮಂತ್ರಿ ಮಗನಾಗಿ ಹೀಗೆ ಮಾತಾಡೋದಕ್ಕೆಧೀಮಂತ ನಾಯಕನ ಬಗ್ಗೆ ಈ ರೀತಿಯಲ್ಲಿ ಮಾತನಾಡುವ ಪ್ರಯತ್ನ ಆಗುತ್ತಿದೆ ಎಂದರು.
ಚುನಾವಣೆ ಬಂದ್ರೆ ಹೆಚ್ಡಿಕೆ ಆಸ್ಪತ್ರೆಗೆ ಸೇರ್ತಾರೆ ಎನ್ನುವ ಹೇಳಿಕೆ ವಿಚಾರವಾಗಿ ಮಾತಜನಾಡಿದ ಅವರು, ಈರೀತಿಯ ವ್ಯಯಕ್ತಿಕ ಟೀಕೆ ಬಿಡಬೇಕು. ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದೀರಾ?ರಾಜ್ಯದ ಜನ ಛೀ.ಥೂ ಅನ್ನುತ್ತಿದ್ದಾರೆ.ಹಾಲಿನ ಪ್ರೋತ್ಸಾಹ ಧನವನ್ನು ರೈತರಿಗೆ ಕಳೆದ ಆರು ತಿಂಗಳಿನಿಂದ ಕೊಟ್ಟಿಲ್ಲ.ಈ ಚುನಾವಣೆ ಎರಡು ಸಿದ್ದಾಂತದ ಮೇಲೆ ನಡೆಯುತ್ತಿದೆ.ಅಭಿವೃದ್ಧಿ ಪರ ಹಾಗೂ ಅಭಿವೃದ್ಧಿ ವಿರೋಧಿಗಳ ನಡುವೆ ನಡೆಯುತ್ತಿರುವ ಚುನಾವಣೆ ಎಂದು ಕಿಡಿಕಾರಿದ್ದರು.