Friday, May 17, 2024

ವಿಶ್ವನಾಥ್ ತಮ್ಮ​ ಮಗನಿಗೆ ಟಿಕೆಟ್ ಸಿಗದಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ: ಸುಧಾಕರ್​

ಬೆಂಗಳೂರು ಗ್ರಾಮಾಂತರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾವಣೆ ವಿಚಾರಕ್ಕೆ ಮಾಜಿ ಸಚಿವ ಹಾಗು ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಪಾಪಾ ಇದೆಲ್ಲ ಎಸ್​.ಆರ್​ ವಿಶ್ವನಾಥ್ ಅವರ ವೈಯಕ್ತಿಕ ಅಭಿಪ್ರಾಯ, ಬಿಜೆಪಿ ವಿಶ್ವದಲ್ಲೆ ದೊಡ್ಡ ಕಾರ್ಯಕರ್ತರನ್ನು ಹೊಂದಿರುವಂತಹ ರಾಷ್ಟ್ರೀಯ ಪಕ್ಷ, ಹೈಕಮಾಂಡ್ ನವರು​ ಯೋಜಿತವಾಗಿ ತೀರ್ಮಾನ ಕೈಗೊಳ್ಳುತ್ತಾರೆ. ಇದೆಲ್ಲಾ ವೈಯಕ್ತಿಕ ಆಸೆ, ದುರಾಸೆಗಳಿಂದ ನೀಡುವ ವ್ಯಾಖ್ಯಾನ ಎಂದರು.

ಇದನ್ನೂ ಓದಿ: ಕೋಲಾರ ಕಾಂಗ್ರೆಸ್​ ಅಭ್ಯರ್ಥಿ ಆಯ್ಕೆ ಗೊಂದಲ: ಹೆಚ್​ಡಿಕೆಯಿಂದ ಕಾದು ನೋಡುವ ತಂತ್ರ

ಮಗನಿಗೆ ಟಿಕೆಟ್​ ತಪ್ಪಿರುವುದಕ್ಕೆ ಬೇಜಾರು ಇರಬಹುದು, ಸಮಯ ಕೊಟ್ಟಾಗ ಎಸ್​ ಆರ್​ ವಿಶ್ವನಾಥ್​ ಮನೆಗೆ ಭೇಟಿ ನೀಡುತ್ತೇನೆ, ಪಕ್ಷದ ಕಟ್ಟಾಳಾಗಿ ವರ್ತಿಸುತ್ತಾರೆ ಎನ್ನುವ ಆಶಾ ಭಾವನೆ ಇದೆ, ವಿಶ್ವನಾಥ್​ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು.

ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ಸುಧಾಕರ್ ಪರ ಮತ ಕೇಳಲ್ಲ ಮತ್ತು ವೇದಿಕೆ ಹಂಚಿಕೊಳ್ಳಲ್ಲ ಎಂಬ ವಿಶ್ವನಾಥ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಇದೆಲ್ಲ ಮಾಮೂಲಿ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES