Friday, May 17, 2024

ಘಾಟಿ ಸುಬ್ರಹ್ಮಣ್ಯ ದೇವಾಲಯ ಹುಂಡಿ ಎಣಿಕೆ: 53 ಲಕ್ಷಕ್ಕು ಹೆಚ್ಚು ಹಣ ಸಂಗ್ರಹ

ದೊಡ್ಡಬಳ್ಳಾಪುರ : ಪ್ರಸಿದ್ದ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಎಣಿಕೆ ಕಾರ್ಯದಲ್ಲಿ ಒಟ್ಟು 53,54,401 ರೂಗಳಷ್ಟು ಹಣ ಸಂಗ್ರಹವಾಗಿದೆ.

ದೇವಾಲಯದ ಆವರಣದಲ್ಲಿ ಭಕ್ತರ ಸಮ್ಮುಖದಲ್ಲಿ, ಬಿಗಿ ಪೊಲೀಸ್​ ಬಂದೋಬಸ್ತ್​​ನಲ್ಲಿ ನಡೆದ ಈ ಕಾಣಿಕೆ ಹುಂಡಿ ಎಣಿಕೆ ಕಾರ್ಯದಲ್ಲಿ 56,800 ರೂಗಳಷ್ಟು ಬೆಲೆ ಬಾಳುವ 1ಕೆಜಿ 540 ಗ್ರಾಂ ತೂಕದ ಬೆಳ್ಳೆ, 5900 ರೂಗಳಷ್ಟು ಬೆಲೆಬಾಳುವ 1.300 ಮಿ.ಗ್ರಾಂ ಚಿನ್ನ ಸೇರಿದಂತೆ ಒಟ್ಟು 53,54,401 ರೂಗಳಷ್ಟು ಹಣ ಸಂಗ್ರಹವಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: ಮಹಿಳಾ ಪ್ರಯಾಣಿಕರೊಬ್ಬರಿಗೆ ಥಳಿಸಿದ ಬಿಎಂಟಿಸಿ ಕಂಡಕ್ಟರ್​! ವೀಡಿಯೋ ವೈರಲ್

ಕಾಣಿಕೆ ಹುಂಡಿ ಎಣಿಕೆ ಕಾರ್ಯದ ವೇಳೆ ಮುಜರಾಯಿ ಇಲಾಖೆ ತಹಶಿಲ್ದಾರ್​ ಜಿ.ಜೆ ಹೆಮಾವತಿ, ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಡಿ. ನಾಗರಾಜು, ಪ್ರಧಾನ ಅರ್ಚಕ ನಾಗೇಂದ್ರ ಶರ್ಮ, ಸಿಬ್ಬಂದಿ ನಂಜಪ್ಪ ಸೇರಿದಂತೆ ಇತರರು ಇದ್ದರು.

RELATED ARTICLES

Related Articles

TRENDING ARTICLES