Friday, September 20, 2024

‘ಸಂಪಾದಿತಲೇ ಪರಾಕ್’.. ಶ್ರೀ ಮೈಲಾರ ಲಿಂಗೇಶ್ವರನ ಕಾರ್ಣಿಕ

ವಿಜಯನಗರ : ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಜಿಗಣೇಹಳ್ಳಿ ಪ್ರಸಿದ್ಧ ಸುಕ್ಷೇತ್ರ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿ ಕಾರ್ಣಿಕ ನುಡಿ ಹೊರಬಿದ್ದಿದೆ.

‘ಸಂಪಾದಿತಲೇ ಪರಾಕ್’ ಎಂಬುದಾಗಿ ಗೊರವಯ್ಯ ರಾಮಣ್ಣ ಕಾರ್ಣಿಕ ನುಡಿಯನ್ನು ನುಡಿದ್ದಾರೆ. ಇದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ವಿಜಯದ ಭವಿಷ್ಯ ಎಂದು ವಿಶ್ಲೇಷಿಸಲಾಗಿದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಾಮಣ್ಣ ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ.

ಕಾರ್ಣಿಕದ ದಿನ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳ ನಂತರ ಹೊಳೆಪೂಜೆ ನಡೆದು ಬಿಲ್ಲನೇರಿದ ಗಣಮಗ ಸದ್ದಲೇ ಎಂದು ಕೂಗಿದಾಗ ಮೌನ ಆವರಿಸಿತು. ಕಾರ್ಣಿಕ ನುಡಿದಾಗ ಜನರು ಹರ್ಷೋದ್ಘಾರಕ್ಕೆ ಈಡಾದರು. ಮುಂದಿನ ವರ್ಷ ಮಳೆ, ಬೆಳೆ ಸಮೃದ್ಧವಾಗುತ್ತದೆ ಎಂಬುದು ಕಾರ್ಣಿಕ ನುಡಿಯ ಅರ್ಥವಾಗಿದೆ.

RELATED ARTICLES

Related Articles

TRENDING ARTICLES