Saturday, May 18, 2024

ಬಿ ವೈ ವಿಜಯೇಂದ್ರ ಗೆ ರಾಜ್ಯಾಧ್ಯಕ್ಷ ಪಟ್ಟ: ನಿಜವಾಯ್ತು ಶಿವಾಚಾರ್ಯ ಸ್ವಾಮಿಗಳ ಕಾಲಜ್ಞಾನ!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿ.ವೈ ವಿಜಯೇಂದ್ರ ಮತ್ತು ಬಿಜೆಪಿ ಪಕ್ಷದ ಕುರಿತು ಕಾಲಜ್ಞಾನ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು 11 ತಿಂಗಳ ಮೊದಲೇ ನೀಡಿದ್ದ ಮುನ್ಸೂಚನೆ ಇಂದು ನಿಜವಾಗಿದೆ.

ಈ ಕುರಿತು ಡಿಸೆಂಬರ್ 25 ರ 2022 ರಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ವಿಚಾರಕ್ಕೆ ಸಂಬಂಧಿಸಿ ಭವಿಷ್ಯ ನುಡಿದಿದ್ದರು. ಇದರಲ್ಲಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೇ ಮೊದಲು ಬಡವರ, ದೀನದಲಿತರ, ನಿರುದ್ಯೋಗಿಗಳ, ರೈತರ, ಸಮಾಜ, ಶಿಕ್ಷಣದ ಪರವಾಗಿ ಉತ್ತಮ ಕೆಲಸಗಳನ್ನು ಮಾಡಿ, ಜನರಿಗೆ ಸೇವಕರಾಗಿ ಜನನಾಯಕಾರಗಬೇಡಿ ಎಂದಿದ್ದರು.

ಇದನ್ನೂ ಓದಿ: ಯಾವ ರಾಶಿಯವರಿಗೆ ಅದೃಷ್ಟ ಹೊತ್ತು ತರಲಿದೆ ಈ ವರ್ಷದ ದೀಪಾವಳಿ

ಬಳಿಕ, ಬಿ.ಎಸ್​ ಯಡಿಯೂರಪ್ಪ ಹಾಗು ಬಿ.ವೈ ವಿಜಯೇಂದ್ರ ಅವರಿಗೆ ಉನ್ನತ ಹುದ್ದೆ ಅಧ್ಯಕ್ಷ ಪದವಿಯನ್ನು ನೀಡಿ ಜೊತೆಗೆ ಶ್ರೀಮಠದ ಸಂಪರ್ಕದಲ್ಲಿರಿ ಮುಂದೆ ನಡೆಯುವ ಪ್ರಭಾವ ನೋಡಿ ಎಂದು ಅವರು ಕಾಲಜ್ಞಾನ ನುಡಿದಿದ್ದರು.  11 ತಿಂಗಳ ಬಳಿಕ ಇಂದು ಕಾಲಜ್ಞಾನ ನಿಜವಾಗಿದ್ದು ಬಿ.ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಒಲಿದು ಬಂದಿದೆ.

RELATED ARTICLES

Related Articles

TRENDING ARTICLES