Saturday, May 18, 2024

ಯಾವ ರಾಶಿಯವರಿಗೆ ಅದೃಷ್ಟ ಹೊತ್ತು ತರಲಿದೆ ಈ ವರ್ಷದ ದೀಪಾವಳಿ

ಬೆಂಗಳೂರು: ಈ ವರ್ಷದ ದೀಪಾವಳಿ ಯಾವ ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ..? ಯಾವ ರಾಶಿಗೆ ಶುಭ ಉಂಟಾಗಲಿದೆ..? ಯಾವ ರಾಶಿಗೆ ಈ ಹಬ್ಬ ಆದೃಷ್ಟ ಹೊತ್ತು ತರಲಿದೆ ಎಂದು ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಪವರ್ ಟಿವಿಗೆ ಶ್ರೀಗಳು ಮಾಹಿತಿ ನೀಡಿದ್ದಾರೆ.

ದೀಪಾವಳಿ ಅಮಾವಾಸ್ಯೆ ನಾಳೆ ಮಧ್ಯಾಹ್ನ 02:45 ಕ್ಕೆ ಅಮಾವಾಸ್ಯೆ ಶುರುವಾಗಿ 13-11-23 ರ ಮಧ್ಯಾಹ್ನ 02:50 ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ಪ್ರಸಿದ್ಧಿ ಯೋಗದಲ್ಲಿ ಬರುತ್ತಿರುವ ಈ ದೀಪಾವಳಿ ಅಮಾವಾಸ್ಯೆಯು ಇಡೀ ಜಗತ್ತಿಗೆ ಮತ್ತು 12 ರಾಶಿಗಳಿಗೆ ನೀಡುವ ಫಲನುಗಳೇನು..?ಎಂಬುವುದನ್ನು ಈ ಕೆಳಗೆ ವಿವರಿಸಲಾಗಿದೆ.

1. ಮೇಷ ರಾಶಿ :- ಈ ರಾಶಿಯವರಿಗೆ ಈ ಅಮಾವಾಸ್ಯೆ ಬಹಳ ಸುಖಪ್ರದವಾಗಿದೆ. ಮದುವೆ ಕಾರ್ಯದಲ್ಲಿ ಮತ್ತು ಪ್ರೀತಿ-ಪ್ರೇಮ ವಿವಾಹದಲ್ಲಿ ಜಯ, ಆರೋಗ್ಯದ ಕಡೆ ಸ್ವಲ್ಪ ಎಚ್ಚರವಹಿಸುವುದು ಒಳಿತು.

ಪರಿಹಾರ :- ಶ್ರೀಲಕ್ಷ್ಮೀನಾರಾಯಣರಿಗೆ ಸಿಹಿ ಪೊಂಗಲ್ ನೈವೇದ್ಯವಾಗಿ ಸಮರ್ಪಿಸಿ, “ಓಂ ಲಕ್ಷ್ಮೀ ನಾರಾಯಣಾಯ ನಮಃ” ಎಂದು 108 ಬಾರಿ ಜಪಿಸಿ.

2. ವೃಷಭ ರಾಶಿ :- ವಿದೇಶ ಪ್ರವಾಸಕ್ಕೆ ಸೂಕ್ತ ಸಮಯ, ಸಂಸಾರದಲ್ಲಿ ಕಲಹಗಳು, ಆದಷ್ಟು ಹಣಕಾಸು ವಿಚಾರಗಳಲ್ಲಿ ಎಚ್ಚರವಹಿಸಿ, ಹರಿಯುವ ನೀರಿನಲ್ಲಿ ಪೂರ್ಣಫಲವನ್ನು (ತೆಂಗಿನಕಾಯಿ) ಅರ್ಪಿಸಿ.‘

ಪರಿಹಾರ :- ಶಿವನಿಗೆ ಬಿಲ್ವಪತ್ರೆಯನ್ನು ಸಮರ್ಪಿಸಿ, “ಓಂ ನಮಃ ಶಿವಾಯ” ಎಂದು 108 ಸಾರಿ ಜಪ ಮಾಡಿ.

3. ಮಿಥುನ ರಾಶಿ :- ಉತ್ತಮ ಉದ್ಯೋಗವು ನಿಮ್ಮ ಪಾಲಾಗುವ ಸಾಧ್ಯತೆ ಮತ್ತು ಅವಕಾಶ, ಸ್ತ್ರೀಯರಿಗೆ ಜಯವಾಗಲಿದೆ. ಸಂತಾನ ಪ್ರಾಪ್ತಿಯೋಗ, ವಾಹನ ಖರೀದಿಗೆ ಉತ್ತಮ ಸಮಯ.

ಪರಿಹಾರ :- ಸುಬ್ರಹ್ಮಣ್ಯ ಸ್ವಾಮಿಗೆ ಹಾಲನ್ನು ಸಮರ್ಪಿಸಿ, “ಓಂ ಸುಬ್ರಹ್ಮಣ್ಯಾಯ ನಮಃ” ಎಂದು 108 ಸಾರಿ ಜಪಿಸಿ.

4. ಕಟಕ ರಾಶಿ :- ನಿಮ್ಮ ಸ್ವಂತ ಮನೆಯನ್ನು ಪಡೆಯುವಿರಿ, ಭೂ ಲಾಭ, ಹೊಸ ಸಂಬಂಧಗಳು ಹುಡುಕಿಕೊಂಡು ಬರಲಿವೆ. ನಿಮ್ಮ ದುಃಖಗಳು ಕಳೆದು ಸಂತೋಷದ ದಿನಗಳು ಬರಲಿವೆ.

ಪರಿಹಾರ :– ಗಣೇಶನ ದೇವಸ್ಥಾನಕ್ಕೆ ಹೋಗಿ ಗರಿಕೆಯನ್ನು ಸಮರ್ಪಿಸಿ ಮತ್ತು ಸಿಹಿ ಪದಾರ್ಥವನ್ನು ಸಮರ್ಪಿಸಿ, “ಓಂ ಗಂ ಗಣಪತಯೇ ನಮಃ” ಎಂದು 108 ಬಾರಿ ಜಪಿಸಿ.

5. ಸಿಂಹ ರಾಶಿ :- ದೂರದ ಪ್ರಯಾಣದಿಂದ ಲಾಭ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ತೃಪ್ತಿ, ವಿವಾಹ ಕಾರ್ಯಗಳಲ್ಲಿ ಯಶಸ್ವಿ, ವಾಹನ ಚಲಿಸುವಾಗ ಎಚ್ಚರದಿಂದ ಇರುವುದು ಒಳಿತು.

ಪರಿಹಾರ :- ಬನ್ನಿ ವೃಕ್ಷದ ಸೇವೆಯನ್ನು ಮಾಡಿ, “ಓಂ ಐಂ ದುರ್ಗಾಯ್ಕೆ ನಮಃ” ಎಂದು 108 ಬಾರಿ ಜಪಿಸಿ.

6.ಕನ್ಯಾ ರಾಶಿ :- ರಾಜಕೀಯ ಜೀವನದಲ್ಲಿ ಮಂದಹಾಸ, ಪಾರ್ಟನರ್ ಶಿಪ್ ವ್ಯವಹಾರಗಳಲ್ಲಿ ಎಚ್ಚರಿಕೆ, ಹೆಂಡತಿಗೆ ನಿಮ್ಮ ಬಂಗಾರದಂತಹ ಸಮಯವನ್ನು ನೀಡಿ, ಅವರೊಂದಿಗೆ ಸಂತಸದ ಸಮಯವನ್ನು ಕಳೆಯಿರಿ.

ಪರಿಹಾರ :- ಶ್ರೀಕೃಷ್ಣನಿಗೆ ಬೆಣ್ಣೆಯನ್ನು ಸಮರ್ಪಿಸಿ, “ಓಂ ಕೃಷ್ಣಾಯ ನಮಃ” ಎಂದು 108 ಬಾರಿ ಜಪಿಸಿ.

7.ತುಲಾ ರಾಶಿ :- ಕೋರ್ಟು ಕೇಸುಗಳಿಂದ ನೆಮ್ಮದಿ, ನಿಮ್ಮ ಹಿತ ಶತೃಗಳಿಂದ ಲಾಭವನ್ನು ಪಡೆಯುವಿರಿ, ಪುಣ್ಯಕ್ಷೇತ್ರಗಳ ದರ್ಶನ, ಭೂ ಖರೀದಿ.

ಪರಿಹಾರ :- ದುರ್ಗಾ ರಕ್ಷಾ ಸ್ತೋತ್ರವನ್ನು ಪಠಣೆ ಮಾಡಿ, ದೀಪ ದುರ್ಗಾ ನಮಸ್ಕಾರವನ್ನು ಮಾಡಿ.

8. ವೃಶ್ಚಿಕ ರಾಶಿ :- ಗರ್ಭಿಣಿಯರೇ ಎಚ್ಚರ, ಜೀರ್ಣಕ್ರಿಯೆ ತೊಂದರೆಗಳು ನಿಮ್ಮನ್ನು ಕಾಡಬಹುದು, ಎಚ್ಚರವಹಿಸುವುದು ಒಳಿತು, ಆದಷ್ಟು ಜಾಗೃತೆಯಿಂದ ಇರಿ, ಭೂವ್ಯಾಜ್ಯಗಳು ಎದುರಾಗುತ್ತದೆ.
ಪರಿಹಾರ :- ದಕ್ಷಿಣಾಮೂರ್ತಿಯನ್ನು ಆರಾಧನೆ ಮಾಡಿ, “ಓಂ ದಕ್ಷಿಣಾಮೂರ್ತಿಯೇ ನಮಃ” ಎಂದು 108 ಸಾರಿ ಜಪಿಸಿ.

9. ಧನುಸ್ಸು ರಾಶಿ :– ಕುಟುಂಬದಲ್ಲಿ ಸಂತೋಷವನ್ನು ಅನುಭವಿಸುವಿರಿ, ಉದ್ಯೋಗ ಸ್ಥಳದಲ್ಲಿ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇದೆ, ಆದಷ್ಟು ಎಚ್ಚರದಿಂದಿರಿ, ದೂರ ಪ್ರಯಾಣ ಬೆಳೆಸುವಿರಿ, ರಾಜಕೀಯದಲ್ಲಿ ಕೋಪ-ತಾಪ ಬೇಡ.

ಪರಿಹಾರ :- ಇಷ್ಟಕಾಮೇಶ್ವರಿಯ ಆರಾಧನೆಯನ್ನು ಮಾಡಿ, “ಓಂ ಶ್ರೀಂ ಇಷ್ಟಕಾಮೇಶ್ವರಿಯ್ಕೆ ನಮ:” ಎಂದು 108 ಸಾರಿ ಜಪಿಸಿ.

10.ಮಕರ ರಾಶಿ :- ಉದ್ಯೋಗದಲ್ಲಿ ಮುಂಬಡ್ತಿ (ಪ್ರಮೋಷನ್) ಪಡೆಯುತ್ತೀರಿ, ಹೊಸ ಉದ್ಯೋಗ ಪ್ರಾರಂಭ, ಪುಣ್ಯಕ್ಷೇತ್ರದ ದರ್ಶನ, ಸಂತೋಷದ ವಾರ್ತೆಯನ್ನು ಕೇಳುವಿರಿ, ವಿವಾಹ ಕಾರ್ಯಗಳು ನಡೆಯುತ್ತದೆ.

ಪರಿಹಾರ :- ಗುರುಗಳ ಸೇವೆಯನ್ನು ಮಾಡಿ “ಓಂ ಗುರುವೇ ನಮಃ” ಎಂದು 108 ಸಾರಿ ಜಪಿಸಿ.

11. ಕುಂಭ ರಾಶಿ :- ಕೆಲವೊಂದು ಸಮಸ್ಯೆಗಳು ಬಂದು ಕಾಡಲಿದೆ, ಬೇರೆಯವರ ತಂಟೆಗೆ ಹೋಗಬೇಡಿ, ಅನ್ಯರ ಯೋಚನೆ ಬಿಟ್ಟು ನಿಮ್ಮ ಯೋಚನೆ ಮಾಡಿ, ಸೋಮಾರಿತನಕ್ಕೆ ಶರಣಾಗಬೇಡಿ, ಒಬ್ಬರನ್ನ ಹಾಳು ಮಾಡಬೇಕೆಂದು ನೀವು ಯೋಚಿಸಿದರೆ ವಿಧಿ ನಿಮ್ಮನ್ನೇ ಹಾಳು ಮಾಡುತ್ತದೆ ಎಚ್ಚರಿಕೆ.

ಪರಿಹಾರ :- ಶನೈಶ್ಚರ ಸ್ವಾಮಿಯ ಆರಾಧನೆಯನ್ನು ಮಾಡಿ, “ಓಂ ಶಂ ಶನೈಶ್ಚರಾಯ ನಮಃ” ಎಂದು 108 ಬಾರಿ ಜಪಿಸಿ.

12.ಮೀನ ರಾಶಿ :- ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ, ಪುಣ್ಯಕ್ಷೇತ್ರಗಳ ದರ್ಶನ, ಗುರುಗಳ ಮಾರ್ಗದರ್ಶನದಲ್ಲಿ ನಡೆಯಿರಿ, ಸಂತಾನ ಪ್ರಾಪ್ತಿಯಾಗುತ್ತದೆ, ನಿಮ್ಮ ಕುಟುಂಬದರೊಂದಿಗೆ ಸ್ವಲ್ಪ ಸಮಯವನ್ನು ಮೀಸಲಿಡಿ.

ಪರಿಹಾರ :- ವಿಷ್ಣುವಿನ ಆರಾಧನೆಯನ್ನು ಮಾಡಿ, “ಓಂ ನಮೋ ಭಗವತೇ ವಾಸುದೇವಾಯ ನಮಃ” ಎಂದು 108 ಬಾರಿ ಜಪಿಸಿ. ಒಳ್ಳೆಯದನ್ನೇ ಯೋಚಿಸಿ, ಒಳ್ಳೆಯದನ್ನೇ ಮಾಡಿ, ನಿಮಗೂ ಒಳಿತೇ ಆಗುತ್ತದೆ.

RELATED ARTICLES

Related Articles

TRENDING ARTICLES