ಶಿವಮೊಗ್ಗ: ಯುವಕನೋರ್ವನಿಗೆ ಚೂರಿ ಇರಿದಿರುವ ಘಟನೆ ಶಿವಮೊಗ್ಗದ ಭದ್ರಾವತಿಯ ಹನುಮಂತನಗರದ ಬಡಾವಣೆಯಲ್ಲಿ ನಡೆದಿದೆ.
ಸ್ಥಳೀಯ ನಂದಕುಮಾರ ಚೂರಿ ಇರಿತಕ್ಕೊಳಗಾದ ಯುವಕನಾಗಿದ್ದು, ಯುವಕರ ಗುಂಪು ಚೂರಿಯಿಂದ ಬೆನ್ನಿಗೆ ಇರಿದಿದ್ದಾರೆ. ಸದ್ಯ ಭದ್ರಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾದ ನಂದಕುಮಾರ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ನೀರಿನ ಹೊಂಡಕ್ಕೆ ಬಿದ್ದು ಬಾಲಕರು ಸಾವು!
ಇನ್ನು, ಘಟನೆ ಬಗ್ಗೆ ನಂದಕುಮಾರ್ ಬಳಿ ವಿಚಾರಿಸಿದಾಗ, ಯುವಕರ ಗುಂಪೊಂದು ಕರೆ ಮಾಡಲು ಮೊಬೈಲ್ ಕೇಳಿದರು, ನಾನು ಕೊಡಲು ನಿರಾಕರಿಸಿದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾನೆ. ಸದ್ಯ, ಮೊಬೈಲ್ ವಿಚಾರಕ್ಕೆ ಯುವಕರ ನಡುವೆ ಪರಸ್ಪರ ಜಗಳ ನಡೆದಿದೆ ಎಂದು ಎಸ್.ಪಿ.ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.