ಬೀದರ್: ನೀರಿನ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಸಾವನಪ್ಪಿರುವ ಘಟನೆ ಬೀದರ್ ತಾಲೂಕಿನ ಬೇಮಳಖೇಡ ಗ್ರಾಮದಲ್ಲಿ ನಡೆದಿದೆ.
ಗಣೇಶ್, ಸಾಯಿನಾಥ್ ಮೃತ ಬಾಲಕರಾಗಿದ್ದು, ಹೊಂಡದಿಂದ ನೀರು ತರಲು ಹೋಗಿದ್ದ ವೇಳೆ ಒಬ್ಬ ಬಾಲಕ ಕಾಲು ಜಾರಿ ಬಿದಿದ್ದಾನೆ, ಆತನನ ರಕ್ಷಿಸಲು ಮುಂದಾದ ಮೊತ್ತಬ್ಬ ಯುವಕನು ನೀರಿಗೆ ಹಾರಿದ್ದಾನೆ. ಈಜುಬಾರದೇ ಇಬ್ಬರು ಬಾಲಕರು ಹೊಂಡದಲ್ಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಇಂದು ಕೂಡ ರಾಜ್ಯದ ಹಲವೆಡೆ ಮಳೆ ಸಾಧ್ಯತೆ!
ಈ ಅವಘಡದ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬಾಲಕರ ಶವವನ್ನ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಬೇಮಳಖೇಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.