ಮೈಸೂರು: ದಕ್ಷಿಣ ಗ್ರಾಮಾಂತರ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಇಬ್ಬರು ಸುಲಿಗೆಕೋರರನ್ನ ಬಂಧಿಸಿದ್ದಾರೆ.
ಕೆಂಪಿ ಸಿದ್ದನಹುಂಡಿ ಗ್ರಾಮದ ಉಮೇಶ್ ಮತ್ತು ಮಂಚಳ್ಳಿಹುಂಡಿಯ ಶಿವಾನಂದ ಬಂಧಿತ ಆರೋಪಿಗಳು. ಆರೋಪಿಗಳಿಂದ ಆಟೋ ಮತ್ತು ಬೈಕ್ಗಳನ್ನ ವಶಕ್ಕೆ ಪಡೆಯಲಾಗಿದೆ. ಸುಲಿಗೆಕೋರರು ಆಟೋವನ್ನ ಬಾಡಿಗೆ ಪಡೆದು ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದರು. ನಂತರ ಚಾಲಕನಿಗೆ ಹಲ್ಲೆ ನಡೆಸಿ ಆಟೋವನ್ನ ಖದೀಮರು ಕದ್ದೊಯ್ತುತ್ತಿದ್ದರು.
ಇದನ್ನೂ ಓದಿ: WWE ಸ್ಟಾರ್ ಜಾನ್ ಸೀನಾ ಭೇಟಿಯಾದ ನಟ ಕಾರ್ತಿ: ಫೋಟೊ ವೈರಲ್!
ಆರೋಪಿಗಳ ಬಂಧನದಿಂದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 10 ಪ್ರಕರಣಗಳು ಪತ್ತೆಯಾಗಿವೆ. ಇವರ ತಂಡದಲ್ಲಿ 6 ಆರೋಪಿಗಳಿದ್ದು, ಇಬ್ಬರನ್ನ ಬಂಧಿಸಲಾಗಿದೆ. ಉಳಿದ ನಾಲ್ವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳ ಬಂಧನದಿಂದ 5 ಸುಲಿಗೆ ಪ್ರಕರಣಗಳು, 2 ದೇವಸ್ಥಾನ ಕಳುವು ಪ್ರಕರಣಗಳು, ಮೂರು ಬೈಕ್ ಕಳವು ಪ್ರಕರಣಗಳು ಪತ್ತೆಯಾಗಿವೆ.