Monday, May 20, 2024

ಸದನದಲ್ಲಿ ‘ಯತ್ನಾಳ್-ಕೋನರೆಡ್ಡಿ’ ಜಟಾಪಟಿ

ಬೆಂಗಳೂರು: ಪಿಎಂ ಮೋದಿ ಎಲ್ಲರ ಖಾತೆಗೆ 15 ಲಕ್ಷ ಜಮೆ ಮಾಡುವುದಾಗಿ ಹೇಳಿದ್ದರು. ಆದರೆ ಯಾರ ಖಾತೆಗೂ ಹಣ ಬರಲಿಲ್ಲ ಸುಳ್ಳು ಭರವಸೆಯನ್ನು ನೀಡಿ  ಮೋಸ ಮಾಡಿದ್ದಾರೆ ಎಂದು ಕೋನರೆಡ್ಡಿ ಹೇಳಿಕೆಗೆ ಬಸನಗೌಡ ಪಾಟೀಲ್ ಯತ್ನಾಳ್ ದ ನಡೆಸಿದರು

ವಿಧಾನಸಭೆ ಕಲಾಪದಲ್ಲಿಶಾಸಕ ಕೋನರೆಡ್ಡಿ ಅವರ ಹೇಳಿಕೆ ಸದನದಲ್ಲಿಂದು ಕೋಲಾಹಲ ಸೃಷ್ಟಿ ಮಾಡಿದೆ.

ಇದನ್ನೂ ಓದಿ: ನಿಮ್ಮನ್ನ ವಿಪಕ್ಷ ನಾಯಕ ಮಾಡಲ್ಲ : ಯತ್ನಾಳ್ ಗೆ ರಾಜಣ್ಣ ಕೌಂಟರ್ 

ಇನ್ನೂ  ವರ್ಗಾವಣೆ ರೇಟ್ ಕಾರ್ಡ್ ಬಗ್ಗೆ ಭಾರೀ ಸದ್ದು ಮಾಡಿದ್ದು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕಾಂಗ್ರೆಸ್ ಶಾಸಕ ಕೋನರೆಡ್ಡಿ ನಡುವೆ ಚರ್ಚೆ ಸದನದಲ್ಲಿ ಸದ್ದು ಮಾಡಿದೆ.

‘ಮಾಜಿ ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ‘ರೇಟ್ ಕಾರ್ಡ್ ನಮ್ಮದಲ್ಲ. ಅದು ಯತ್ನಾಳ್‌ಗೆ ಸೇರಿದ್ದು. ಯತ್ನಾಳ್ ಅವರೇ ಸಿಎಂ ಕುರ್ಚಿಗೆ 2,500 ಕೋಟಿ ರೂಪಾಯಿ ಕಮಿಷನ್ ಎಂದಿದ್ದರು’ ಎಂದು ಕೋನರೆಡ್ಡಿ ಆರೋಪಿಸಿದರು. ಇದಕ್ಕೆ ದಾಖಲೆ ನೀಡಿ ಎಂದು ಯತ್ನಾಳ್ ತಿರುಗೇಟು ನೀಡಿದರು.

 

 

RELATED ARTICLES

Related Articles

TRENDING ARTICLES