ಬೆಂಗಳೂರು : ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯಗೆ ಅಲ್ಪಸಂಖ್ಯಾತರ ಬಗ್ಗೆ ವಿಶೇಷ ಕಾಳಜಿ. ಅವರಿಲ್ಲದೆ ಇವರಿಗೆ ಉಸಿರಾಡಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಕುಟುಕಿದರು.
ರಾಜ್ಯ ಬಜೆಟ್ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಚೇರಿಯ ಭಾಷಣ ಇದು ಎಂದು ಚಾಟಿ ಬೀಸಿದರು.
ಈ ಸಾಲಿನ ಬಜೆಟ್ ಅನ್ನು ಒಂದೇ ಲೈನ್ ನಲ್ಲಿ ಹೇಳೋದಾದ್ರೆ, ಕೇಂದ್ರ ಸರ್ಕಾರ ಏನೂ ಕೊಡಲಿಲ್ಲ. ಹಿಂದಿನ ಸರ್ಕಾರ ಏನೂ ಮಾಡಲಿಲ್ಲ. ನಾನೂ ಏನೂ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಅನ್ನೋದು ಅವರ ಸಾರಾಂಶ ಎಂದು ಸಿದ್ದರಾಮಯ್ಯಗೆ ಕೌಂಟರ್ ಕೊಟ್ಟರು.
ಇದನ್ನೂ ಓದಿ : ಡಿಕೆಶಿ ಮೇಲೆ ಸಿದ್ದರಾಮಯ್ಯ ಸೇಡು ತೀರಿಸಿಕೊಂಡಿದ್ದಾರೆ : ಬಿ.ವೈ ವಿಜಯೇಂದ್ರ
ಕಾಗೆ ಹಾರಿಸೋ ಬಜೆಟ್ ಇದು
ಬಜೆಟ್ ಅಂದರೆ ಆರ್ಥಿಕ ಮುನ್ನೋಟ. ಹಿಂದಿನ ಸರ್ಕಾರ ತೋರಿಸಿ ಕಾಗೆ ಹಾರಿಸೋ ಬಜೆಟ್ ಇದು. ಯಾವ ಯೋಜನೆ ಅಂತ ತೋರಿಸದ ಬಜೆಟ್ ಮಂಡಿಸಿದ್ದಾರೆ. ಚರ್ಚೆಯ ಸಂದರ್ಭದಲ್ಲಿ ವಿರೋಧಿಸುವ ಕೆಲಸ ಮಾಡ್ತೀವಿ. ವಿಶೇಷವಾಗಿ ಎನ್ ಇಪಿ (NEP) ಕೈಬಿಡೋದಾಗಿ ಹೇಳಿದ್ದಾರೆ. ಇಡೀ ಶಿಕ್ಷಣ ವ್ಯವಸ್ಥೆ ಅಲುಗಾಡಿಸುವ ಕೆಲಸ ಮಾಡಿದ್ದಾರೆ ಎಂದು ಛೇಡಿಸಿದರು.
ಅಲ್ಪಸಂಖ್ಯಾತರಿಗೆ ವಿಶೇಷ ಪ್ರೀತಿ
ಭೌಗೋಳಿಕವಾಗಿ ಯಾವುದೇ ಭಾಗಕ್ಕೆ ನ್ಯಾಯ ಒದಗಿಸದ ಬಜೆಟ್ ಇದು. ಚುನಾವಣೆ ಸಂದರ್ಭದಲ್ಲಿ ಹೇಳಿದ ಉಚಿತ ಗ್ಯಾರಂಟಿ ತೋರಿಸೋದು ಮಾತ್ರ ಮಾಡಿದ್ದಾರೆ. ಬೇರೆ ಏನೂ ಇದರಲ್ಲಿ ಇಲ್ಲ. ಮೈನಾರಿಟಿಗೆ ಹೆಚ್ಚು ಒತ್ತು ವಿಚಾರ, ಅಲ್ಪ ಸಂಖ್ಯಾತರಿಗೆ ವಿಶೇಷ ಪ್ರೀತಿ ತೋರಿಸಿದೆ. ಅದರಲ್ಲಿ ವಿಶೇಷತೆ ಏನೂ ಇಲ್ಲ ಎಂದು ಕುಟುಕಿದರು.