Wednesday, April 24, 2024

ನಾನು ಸೋತಿದ್ರೆ ಕೋರ್ಟ್ ಪಕ್ಕನೇ ಮನೆ ಮಾಡಬೇಕಿತ್ತು : ಪ್ರದೀಪ್ ಈಶ್ವರ್

ಬೆಂಗಳೂರು : ನಾನು ಸೋತಿದ್ರೆ ಕೋರ್ಟ್ ಪಕ್ಕನೇ ಮನೆ ಮಾಡಬೇಕಿತ್ತು ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಮಾಜಿ ಸಚಿವ ಡಾ.ಕೆ ಸುಧಾಕರ್ ಗೆ ಟಾಂಗ್ ಕೊಟ್ಟಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೋಮಡಿದ್ದ ಮತದಾರರಿಗೆ ಕೃತಜ್ಞತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಜಿ ಸಚಿವ ಡಾ.ಕೆ ಸುಧಾಕರ್ ಅವರ ಕ್ರೂರತ್ವ, ದ್ವೇಷ ಅಸೂಯೆಯನ್ನ ಬಿಚ್ಚಿಟ್ಟರು.

ಮಾಜಿ ಸಚಿವ ಡಾ.ಕೆ.ಸುಧಾಕರ್, ಸೈಲೆಂಟಾಗಿ‌ ವಿಷ ಕೊಟ್ರು. ಆದರೆ. ನಾನು ಅಮೃತ ಉಣಬಡಿಸುತ್ತೇನೆ. ಡಾ.ಕೆ ಸುಧಾಕರ್ ಅಧಿಕಾರದಲ್ಲಿದ್ದಾಗಲೇ ನನ್ನ ಮೇಲೆ 22 ಕೇಸ್ ಹಾಕಿಸಿ ಮಾನಸಿಕ ಹಿಂಸೆ ನೀಡಿದ್ರು. ಒಂದು ವೇಳೆ ಈ‌ ಚುನಾವಣೆಯಲ್ಲಿ ನಾನು ಸೋತಿದ್ರೆ, ಹತ್ತಾರು ಕೇಸ್ ಗಳನ್ನು ನನ್ನ ಮೇಲೆ ಹಾಕಿಸ್ತಿದ್ರು. ಆಗ, ನಾನು ಕೋರ್ಟ್ ಪಕ್ಕದಲ್ಲೇ ಮನೆ ಮಾಡಬೇಕಿತ್ತು ಎಂದು ಮಾರ್ಮಿಕಾಗಿ ಹೇಳಿದ್ದಾರೆ.

ಇದನ್ನೂ ಓದಿ : ಬಾಡಿಗೆದಾರರಿಗೂ 200 ಯುನಿಟ್ ಫ್ರೀ ವಿದ್ಯುತ್ : ಕೆ.ಜೆ ಜಾರ್ಜ್

ಉಚಿತ ಗ್ಯಾರಂಟಿಯಿಂದ ದಿವಾಳಿ ಆಗಲ್ಲ

ಉಚಿತ ಭಾಗ್ಯಗಳಿಂದ ಕರ್ನಾಟಕ ಶ್ರೀಲಂಕವಾಗಲಿದೆ ಎಂಬ ಶಿಡ್ಲಘಟ್ಟ ಶಾಸಕ ಮೇಲೂರು ರವಿಕುಮಾರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಮೊದಲು ಸರಿಯಾಗಿ ಓದಿಕೊಳ್ಳಲು ಹೇಳಿ. ಶ್ರೀಲಂಕಾಗೆ ಆ ಸ್ಥಿತಿ ಬರಲು ಏನು ಕಾರಣ ಎಂದು ತಿಳಿದುಕೊಳ್ಳಲಿ. ಜನರಿಗೆ ಊಟ, ಬಡವರಿಗೆ ಹಣ ಕೊಟ್ಟ ಮಾತ್ರಕ್ಕೆ ಯಾವುದು ದಿವಾಳಿಯಾಗಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ತಿರುಗೇಟಿ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES