Monday, May 20, 2024

ಶ್ರೀ ದೇವಿ ಛಿನ್ನಾಮಸ್ತ ಜಯಂತಿ : ದೇವಿ ಆರಾಧನಾ ವಿಧಾನ, ಫಲಗಳ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು : ಶ್ರೀ ಛಿನ್ನಾಮಸ್ತ ದೇವಿ ಜಯಂತಿಯನ್ನು ಶಕ್ತಿ ದೇವಿಯು ಛಿನ್ನಾಮಸ್ತ ರೂಪದಲ್ಲಿ ಕಾಣಿಸಿಕೊಂಡ ದಿನವೆಂದು ನಂಬಲಾಗಿದೆ. ದೇವಿಯ ಆರಾಧನೆಯ ಫಲಗಳು, ಆರಾಧನೆಯ ಸರಳ ವಿಧಾನದ ಬಗ್ಗೆ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ(Siddalinga Shivacharya Shree) ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಈ ಭೂಮಂಡಲದಲ್ಲಿ ಶಕ್ತಿಗೆ ವಿಶಿಷ್ಟವಾದ ಸ್ಥಾನವಿದೆ. ತಾಯಿಯೇ ಮೊದಲ ಗುರು ಎನಿಸುತ್ತಾಳೆ. ನಮಗೆ ಏನಾದರೂ ಕಷ್ಟಗಳು ಬಂದರೆ ಮೊದಲು ತಾಯಿಯನ್ನು ಕರೆಯುತ್ತೇವೆ. ಹೀಗೆಯೇ ಜಗತ್ತಿನಲ್ಲಿ ಪ್ರತಿಯೊಂದು ಜೀವಿಯು ಆ ಜಗನ್ಮಾತೆಯನ್ನು ಸ್ಮರಿಸುತ್ತಾ ಮುಕ್ತಿಯನ್ನು ಪಡೆಯುತ್ತಾರೆ ಎಂದು ಶ್ರೀಗಳು ಹೇಳಿದ್ದಾರೆ.

ದೇವಿಯನ್ನು ಆರಾಧಿಸುವ ಪ್ರತಿಯೊಂದು ಜೀವಿಗೂ ಶ್ರೀದೇವಿಯು ಸಕಲ ಸೌಲಭ್ಯಗಳನ್ನು, ಭಕ್ತಿ ಮುಕ್ತಿಯನ್ನು ಅನುಗ್ರಹಿಸುತ್ತಾ ಬರುತ್ತಿದ್ದಾಳೆ. ಜಗತ್ತಿಗೆ ಸಂಕಷ್ಟಗಳು ಎದುರಾದಾಗ ಅನೇಕ ಅವತಾರಗಳನ್ನು ತಾಳಿ ಲೋಕ ಕಲ್ಯಾಣವನ್ನು ಉಂಟುಮಾಡಿದ್ದಾಳೆ ಎಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಇದನ್ನೂ ಓದಿ : ‘ಬಗಳಾಮುಖಿಯ ಆರಾಧನೆ’ ಯಾಕೆ ಮಾಡಬೇಕು? ಯಾವ ರೀತಿ ಆರಾಧಿಸಬೇಕು?

ಛಿನ್ನಾಮಸ್ತ ದೇವಿ ಆರಾಧನೆಯಿಂದ ದೊರಕುವ ಫಲಗಳು

ಛಿನ್ನಾಮಸ್ತ ದೇವಿಯ ಸರಳ ರೀತಿಯ ಆರಾಧನೆ ವಿಧಾನ

ಛಿನ್ನಾಮಸ್ತ ದೇವಿಯ ಉಪಯುಕ್ತ ಮಂತ್ರಗಳು

ಛಿನ್ನಾಮಸ್ತ ದೇವಿಯನ್ನು ಶುದ್ದ ಮನಸ್ಸಿನಿಂದ ಸಾಧನೆ ಮಾಡಿನಿಮ್ಮೆಲ್ಲರಿಗೂ ಶುಭವಾಗಲಿ ಎಂದು ಆಶೀರ್ವಾದ ಮಾಡುತ್ತಾ, ಒಳ್ಳೆಯದನ್ನು ಯೋಚಿಸಿ, ಒಳ್ಳೆಯದನ್ನೇ ಮಾಡಿ. ನಿಮಗೂ ಒಳ್ಳೆಯದೇ ಆಗುತ್ತದೆ. ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ(Siddalinga Shivacharya Shree) ಹೇಳಿದ್ದಾರೆ.

RELATED ARTICLES

Related Articles

TRENDING ARTICLES