Friday, May 17, 2024

ಶಾಸಕ ರೇಣುಕಾಚಾರ್ಯ ಅಣ್ಣನ ಮಗ ಕಾಣೆ; ಕಾಲುವೆಯಲ್ಲಿ ಕಾರಿನ ಬಿಡಿ ಭಾಗಗಳು ಪತ್ತೆ.!

ದಾವಣಗೆರೆ; ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರ ಪುತ್ರ ಕಾಣೆಯಾದ ಪ್ರಕರಣಕ್ಕೆ ಟ್ವೀಸ್ಟ್​ ಸಿಕ್ಕಿದ್ದು, ಕಾಲುವೆಯಲ್ಲಿ ಕಾರಿನ ಬಿಡಿ ಭಾಗಗಳು ಸಿಕ್ಕಿವೆ.

ರೇಣುಕಾಚಾರ್ಯ ಅಣ್ಣನ ಮಗ ಕಾರು ಸಮೇತ ಕಾಣೆಯಾಗಿದ್ದ ಚಂದ್ರಶೇಖರ್​, ಈಗ ಕಾರು ಹೊನ್ನಾಳಿಯ ಹೆಚ್​.ಕಡೆದಕಟ್ಟೆ ಪಕ್ಕದ ಕಾಲುವೆಯಲ್ಲಿ ಪತ್ತೆಯಾಗಿದೆ. ಕಾಲುವೆಗೆ ಡಿಕ್ಕಿ ಹೊಡೆದು ಕಾರು ಸಮೇತ ರೇಣುಕಾಚಾರ್ಯ ಅಣ್ಣನ ಮಗ ಕಾಲುವೆಗೆ ಬಿದ್ದಿರುವ ಶಂಕೆ ಇದೆ.

ಹೌದು.. ಕಳೆದ ನಾಲ್ಕು ದಿನದ ಹಿಂದ ಶಾಸಕ ರೇಣುಕಾಚಾರ್ಯ ಅಣ್ಣನ ಮಗ 27 ವರ್ಷದ ಚಂದ್ರಶೇಖರ್ ವಿನಯ್ ಗುರೂಜಿ ಅವರನ್ನು ಭೇಟಿಯಾಗಲೆಂದು ಭಾನುವಾರ ಶಿವಮೊಗ್ಗ ಗೌರಿಗದ್ದೆಗೆ ತನ್ನ ಹೊಂಡಾಯ್ ಕ್ರೇಟಾ ಗಾಡಿಯಲ್ಲಿ ತೆರಳಿದ್ದ. ಅಲ್ಲಿಂದ ವಿನಯ್ ಗುರೂಜಿ ಭೇಟಿ ಮಾಡಿ ಅವರ ಆರ್ಶೀವಾದ ಪಡೆದು, ನಂತರ ಅಲ್ಲಿಂದ ಚಂದ್ರು ಶಿವಮೊಗ್ಗದಲ್ಲಿ ತನ್ನ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಹೊತ್ತು ಅವರೊಂದಿಗೆ ಕಾಲ ಕಳೆದು ಮತ್ತೆ ವಾಪಸ್ ಹೊನ್ನಳಿಗೆ ಬಂದಿದ್ದಾರೆ.

ಅಂದೇ ತಡರಾತ್ರಿ 11:30ಕ್ಕೆ ಹೊನ್ನಾಳಿ ಸಂತೆ ಮೈದಾನದಲ್ಲಿ ಚಂದ್ರಶೇಖರ್ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದು ಬಂದಿದೆ. ಆದ್ರೆ ಹೊನ್ನಾಳಿಯಿಂದ ಚಂದ್ರಶೇಖರ್ ಮನೆಗೆ ಬಂದಿಲ್ಲ ಎಂದು ಕುಟುಂಬಸ್ಥರು ಹಾಗೂ ಶಾಸಕರು ಕಣ್ಣೀರು ಇಟ್ಟು ಗೋಗೆರೆದಿದ್ದರು.

RELATED ARTICLES

Related Articles

TRENDING ARTICLES