Saturday, May 18, 2024

ಪಿಎಸ್ಐ ಅಶ್ವಿನಿ ಅಮಾನತು ಮಾಡಿದ ಪೊಲೀಸ್ ಆಯುಕ್ತ ಆದೇಶ

ಮೈಸೂರು: ಜಿಲ್ಲೆಯ ನರಸಿಂಹರಾಜ್ ಸಂಚಾರಿ ಪಿಎಸ್ಐ ಅಶ್ವಿನಿ ಅನಂತಪುರ ಅವರನ್ನ ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ಪಿಎಸ್ಐ ಅಶ್ವಿನಿ ಅನಂತಪುರ ಅವರ ಮೇಲೆ ಎಫ್​ಡಿಎ ಪರೀಕ್ಷಾ ಅಕ್ರಮದಲ್ಲಿ ಹೆಸರು ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಎನ್.ಆರ್ ಠಾಣೆಯ ಪಿಎಸ್​ಐ ಅಶ್ವಿನಿ ಅನಂತಪುರ ಅವ್ರನ್ನ ಅಮಾನತು ಮಾಡಿ ಆದೇಶಿಸಲಾಗಿದೆ.

2020 ರಲ್ಲಿ ನಡೆದ ಕೆಪಿಎಸ್​ಸಿ ಪರಿಕ್ಷೇಯಲ್ಲಿ ನೌಕರಿ ಕೊಡಿಸೋದಾಗಿ ಪಿಎಸ್​ಐ 15 ಲಕ್ಷಕ್ಕೆ ವಿಜಯಪುರ ಮೂಲದ ವ್ಯಕ್ತಿವೊಬ್ಬನಿಗೆ ಬೇಡಿಕೆವಿಟ್ಟು, ಮುಂಗಡವಾಗಿ 2ಲಕ್ಷ ಪಡೆದಿದ್ದರು ಎಂದು ಅಭ್ಯರ್ಥಿ ಸಹೋದರ ಸಂಗಮೇಶ ಝಳಕಿ ಆರೋಪಿಸಿದ್ದರು.

ಬಸವರಾಜ ಝಳಕಿ ಎಫ್ ಡಿಸಿ ಹುದ್ದೆಗೆ ಪರೀಕ್ಷೆ ಬರೆದಿದ್ದರು, ಈ ಆಡಿಯೋದಲ್ಲಿ  ಪಿಎಸ್ಐ ಅವರು ಅಭ್ಯರ್ಥಿಗೆ ಪರೀಕ್ಷೆಯ ಡೀಲ್ ಹೇಗೆಲ್ಲಾ ಆಗುತ್ತೆ ಅಂತ ಹೇಳಿದ್ದಾರೆ. ಅಶ್ವಿನಿ ಮೂಲತಃ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದವರಾಗಿದ್ದಾರೆ.

RELATED ARTICLES

Related Articles

TRENDING ARTICLES