ನವದೆಹಲಿ: ಬ್ರಿಟನ್ ರಾಣಿ ಎಲಿಜಬೆತ್ ಅವರ ನಿಧನ ಹಿನ್ನಲೆಯಲ್ಲಿ ಗೌರವಾರ್ಥವಾಗಿ ಸೆಪ್ಟೆಂಬರ್ 11 ರಂದು ಭಾರತದಲ್ಲಿ ಶೋಕಾಚರಣೆಯನ್ನು ಆಚರಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.
96 ನೇ ವಯಸ್ಸಿನ ಇಂಗ್ಲೆಂಡ್ ರಾಣಿ ಎಲಿಜಿಬತ್ ನಿನ್ನೆ ನಿಧನರಾದರು. ನಿಧನ ಹಿನ್ನಲೆ ಭಾರತ ಸರ್ಕಾರದಿಂದ ಸೆ.11(ಭಾನುವಾರ) ರಂದು ಒಂದು ದಿನ ಶೋಕಾಚರಣೆ ನಿರ್ಧಾರ ಮಾಡಿದೆ.
ಈ ಟ್ವೀಟ್ ಮಾಡಿದ ಕೇಂದ್ರ ಸರ್ಕಾರ, ಬ್ರಿಟನ್ ರಾಣಿ ಎಲಿಜಿಬತ್ ನಿಧನರಾದರು. ಅಗಲಿದ ಗಣ್ಯರ ಗೌರವಾರ್ಥವಾಗಿ, ಭಾರತ ಸರ್ಕಾರವು ಸೆಪ್ಟೆಂಬರ್ 11 ರಂದು ಒಂದು ದಿನದ ಶೋಕಾಚರಣೆಯನ್ನು ಆಚರಿಸಲು ನಿರ್ಧರಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ಕಾರ ಕಟ್ಟಡಗಳ ಮೇಲೆ ದೇಶದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧ ಹಾರಿಸಲಾಗುತ್ತದೆ. ಈ ದಿನದಂದು ಯಾವುದೇ ಸರ್ಕಾರಿ ಅಧಿಕೃತ ಕಾರ್ಯಕ್ರಮ ಇರುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.
One Day State Mourning on September 11th as a mark of respect on the passing away of Her Majesty Queen Elizabeth II, United Kingdom of Great Britain and Northern Ireland
Press release-https://t.co/dKM04U5oOn pic.twitter.com/qhiU4A7gBW
— Spokesperson, Ministry of Home Affairs (@PIBHomeAffairs) September 9, 2022