Monday, May 13, 2024

ಮೌನಕ್ಕೆ ಶರಣಾದ ಶ್ರೀಗಳು

ಚಿತ್ರದುರ್ಗ : ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿರುವ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ಶ್ರೀ ಶಿವಮೂರ್ತಿ ಮುರುಘಾ ಶರಣರು ಬಂಧನ ಭೀತಿಯಲ್ಲಿದ್ದಾರೆ.

ನಗರದ ಬಾಲಕಿಯರ ಆರೋಪ ಸಾಬೀತಾದ್ರೆ ಮುರುಘಾ ಶ್ರೀ ಬಂಧನ ಸಾಧ್ಯತೆ ಇದೆ. ಮಠದಲ್ಲೇ ಮೌನಕ್ಕೆ ಶರಣಾಗಿರುವ ಮುರುಘಾ ಶ್ರೀಗಳು. ವೈದ್ಯಕೀಯ ಪರೀಕ್ಷೆ ಬಳಿಕ ಶ್ರೀಗಳನ್ನ ವಶಕ್ಕೆ ಪಡೆದು ವಿಚಾರಣೆ ಸಾಧ್ಯತೆ ಇದೆ.

ಇನ್ನು, ಮುರುಘಾ ಮಠದ ಆಡಳಿತಾಧಿಕಾರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮನೆ ಬೀಗ ಹಾಕಿಕೊಂಡು ನಾಪತ್ತೆಯಾಗಿರುವ ಬಸವರಾಜನ್​​, ಕಳೆದ 4 ದಿನಗಳಿಂದ ಗೌಪ್ಯ ಸ್ಥಳದಲ್ಲಿದ್ದಾರೆ. ಅಕ್ಕಮಹಾದೇವಿ ವಿದ್ಯಾರ್ಥಿ ನಿಲಯದ ವಾರ್ಡನ್​​ ದೂರು ನೀಡಿದ್ದು, FIR ದಾಖಲಾಗಿರೋ ಹಿನ್ನೆಲೆ ಬಸವರಾಜನ್ ಬಂಧನ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES