Friday, May 17, 2024

ಹಿಜಾಬ್ ಅವಕಾಶ ಇಲ್ಲದ ಕಾಲೇಜುಗಳಿಂದ ಟಿಸಿ ಹಿಂಪಡೆದ ಮುಸ್ಲಿಂ ವಿದ್ಯಾರ್ಥಿನಿಯರು

ಮಂಗಳೂರು : ಹಿಜಾಬ್ ಅವಕಾಶ ಇಲ್ಲದ ಕಾಲೇಜುಗಳಿಂದ ಟಿಸಿ ಹಿಂಪಡೆದ ಮುಸ್ಲಿಂ ವಿದ್ಯಾರ್ಥಿನಿಯರು ದ.ಕ‌., ಉಡುಪಿ, ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ 16 ಶೇ. ಮುಸ್ಲಿಂ ವಿದ್ಯಾರ್ಥಿನಿಯರಿಂದ ಟಿಸಿ ಹಿಂದೆಗೆದಿದ್ದಾರೆ.

ದ.ಕನ್ನಡ, ಉಡುಪಿಯಲ್ಲಿ 900 ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ 145 ಮಂದಿ ಟಿಸಿ ಹಿಂದೆಗೆದಿದ್ದಾರೆ, ಸರ್ಕಾರಿ ಕಾಲೇಜಿನಿಂದ 34 ಶೇ., ಅನುದಾನಿತ ಕಾಲೇಜಿನಲ್ಲಿ 13 ಶೇ. ವಿದ್ಯಾರ್ಥಿನಿಯರ ಟಿಸಿ ಹಿಂಪಡೆದಿದ್ದು, RTI ಪ್ರಶ್ನೆಗೆ ರಾಜ್ಯ ಶಿಕ್ಷಣ ಇಲಾಖೆ ಉತ್ತರ ನೀಡಿದೆ.

ಇನ್ನು, ವಿದ್ಯಾರ್ಥಿನಿಯರು ಟಿಸಿ ಪಡೆಯಲು ಕಾರಣ ಶಿಕ್ಷಣ ಸಚಿವ ತಾರತಮ್ಯ ಎಂದ ಹಿಜಾಬ್ ಹೋರಾಟಗಾರ್ತಿ ಗೌಸಿಯಾ ಹಿಜಾಬ್ ಧರಿಸಲು ಅವಕಾಶ ಇಲ್ಲದ ಕಾರಣ ಕಾಲೇಜಿನಿಂದ ಟಿಸಿ ಪಡೆದಿರುವ ಗೌಸಿಯಾ ಸಂವಿಧಾನ ನೀಡಿರುವ ಹಕ್ಕಿನ ಪ್ರಕಾರ ಶಿಕ್ಷಣ ಪಡೆಯಲು ಬಿಜೆಪಿ ಸರಕಾರ ಬಿಡಲಿಲ್ಲ. ತುಂಡು ಬಟ್ಟೆಯನ್ನೇ ದೊಡ್ಡ ವಿವಾದವನ್ನಾಗಿ ಮಾಡಿದ್ದಾರೆ. ಇದರಿಂದ ಪರೋಕ್ಷವಾಗಿ ಸರ್ಕಾರಿ ಕಾಲೇಜುಗಳಿಗೆ ಹೊಡೆತ ಬೀಳಲಿದೆ. ಇಡೀ ರಾಜ್ಯಾದ್ಯಂತ 30 ಶೇ.ಕ್ಕೂ ಅಧಿಕ ವಿದ್ಯಾರ್ಥಿನಿಯರು ಕಾಲೇಜು ಬಿಟ್ಟಿದ್ದಾರೆ. ರಾಜ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣ ವಂಚಿಸಿದೆ ಬಿಜೆಪಿ ಸರ್ಕಾರ ಮಂಗಳೂರು ವಿವಿ ಕಾಲೇಜಿನಿಂದ ಟಿಸಿ ಪಡೆದ ವಿದ್ಯಾರ್ಥಿನಿ ಗೌಸಿಯಾ ಹೇಳಿದ್ದಾರೆ.

RELATED ARTICLES

Related Articles

TRENDING ARTICLES