ರಾಮನಗರ : ಕಾಂಗ್ರೆಸ್ ಪಕ್ಷವನ್ನ ಸಿದ್ದರಾಮಯ್ಯನವರಿಗೆ ಸಿಮೀತ ಮಾಡಿಕೊಂಡಿದ್ದಾರೆ ಎಂದು ಸಚಿವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಇರೋ ನಾಯಕರಿಗೆ ನಡುಕ ಬಂದಿದೆ. ಸಿಎಂ ಖುರ್ಚಿ ಯಾರಿಗೆ ಯಾರಿಗೆ ಎಂದು ನಡುಕ ಬಂದಿದೆ. ಕಾಂಗ್ರೆಸ್ ಪಕ್ಷ ಅಂದರೆ ಕೇವಲ ಸಿದ್ದರಾಮಯ್ಯ ಅನ್ನುವ ಹಾಗೆ ಇದೆ. ಹೀಗಾಗಿ ಬೇರೆ ಬೇರೆ ಜಾತಿಯ ನಾಯಕರು ಆ ಪಕ್ಷದಲ್ಲಿ ಯಾಕೆ ಇರುತ್ತಾರೆ. ಡಿಕೆ ಶಿವಕುಮಾರ್ ಸಹಾ ಸಿದ್ದರಾಮಯ್ಯ ಜೀ ಅಂದಿದ್ದಾರೆ. ಸಿದ್ದರಾಮಯ್ಯ ನವರಿಗೆ ಜೈ ಅಂದು ಮಾಯವಾಗಿದ್ದಾರೆ. ಕಾಂಗ್ರೆಸ್ ಪಕ್ಷವನ್ನ ಸಿದ್ದರಾಮಯ್ಯ ನವರಿಗೆ ಸಿಮೀತ ಮಾಡಿಕೊಂಡಿದ್ದಾರೆ ಎಂದರು.
ಇನ್ನು, ಕಾಂಗ್ರೆಸ್ ಪರಿಸ್ಥಿತಿ ಏನು ಎಂದು ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ತೋರಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನೆಲೆ, ಜನರ ಆಶೀರ್ವಾದ ಇಲ್ಲದಂತೆ ಆಗಿದೆ. ಕಾಂಗ್ರೆಸ್ನವರು ಹಗಲುಗನಸುಕಾರರು. ಹೀಗೆ ಹೇಳಿಕೊಂಡು ಕಾಂಗ್ರೆಸ್ನವರು ಇರಲಿ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ, ನಾವೇ ಆಡಳಿತ ಮಾಡುತ್ತೇವೆ ಎಂದು ಹೇಳಿದರು.
ಅಹಿಂದ ಮತಗಳನ್ನ ಕಿತ್ತುಹಾಕುವ ಕೆಲಸ ಬಿಜೆಪಿ ಮಾಡುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲೇ ಮತದಾರರ ಪಟ್ಟಿಯನ್ನ ರಾತ್ರೋರಾತ್ರಿ ಜೋಡಿಸುತ್ತಿದ್ದರು. ಇಂತಹ ಕೆಲಸಗಳನ್ನ ಮಾಡುವುದರಲ್ಲಿ ಪ್ರವೀಣರು. ಅನುಭವ ಜಾಸ್ತಿ ಅಲ್ವಾ. ಇದನ್ನೇ ಮಾಡಿಕೊಂಡು ಬಂದವರು ಎಂದು ಡಿಕೆಶಿಗೆ ಅಶ್ವತ್ಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.
ರಾಜ್ಯ ಸರ್ಕಾರಕ್ಕೆ ಅಮಿತ್ ಶಾ ಸೂಚನೆ ಸಲಹೆ ವಿಚಾರವಾಗಿ ಮಾತನಾಡಿದ ಅವರು, ಚೆನ್ನಾಗಿ ಕೆಲಸ ಮಾಡಿ, ಅಧಿಕಾರಕ್ಕೆ ಬನ್ನಿ ಎಂದು ಸೂಚನೆ ಕೊಟ್ಟಿದ್ದಾರೆ. ಸಿದ್ದರಾಮೋತ್ಸವ ಮಾಡಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಪತನವಾಗಿದೆ. ಸಿದ್ದರಾಮೋತ್ಸವ ಮಾಡಿದ ದಿನವೇ ಕಾಂಗ್ರೆಸ್ ಪಕ್ಷ ಹಾರಿ ಹೋಯಿತು. ಜನ ನಮ್ಮಜೊತೆ ಇದ್ದಾರೆ. ಎಲ್ಲ ಜನಾಂಗ ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾಗಿದೆ ಎಂದರು.