Friday, May 17, 2024

ಅಮೃತ ಮಹೋತ್ಸವ: ಸ್ವಕ್ಷೇತ್ರದಲ್ಲಿ ಸಿದ್ದರಾಮಯ್ಯ ಪಾದಯಾತ್ರೆಗೆ ಚಿಂತನೆ

ಬಾಗಲಕೋಟೆ: ಸ್ವಾತಂತ್ರ್ಯೋತ್ಸವ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಎಲ್ಲೆಡೆ ಭಾರತ್​ ಜೋಡೋ ಹೆಸರಿನಲ್ಲಿ ಪಾದಯಾತ್ರೆ ನಡೆಸಲು ಮುಂದಾಗಿದೆ.

ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ ಸ್ವಕ್ಷೇತ್ರ ಬದಾಮಿಯಲ್ಲಿ ಎರಡು ದಿನಗಳ ಪಾದಯಾತ್ರೆಗೆ ಮುಂದಾಗಿದ್ದಾರೆ.. ಇದರ ಬೆನ್ನಲ್ಲೆ ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಂಜಯ್ಯನಮಠ, ಪಾದಯಾತ್ರೆ ಆಯೋಜಿಸಲು ಪ್ಲ್ಯಾನ್​ವೊಂದನ್ನು ರೆಡಿ ಮಾಡಿಕೊಂಡಿದ್ದಾರೆ.

ಇದಕ್ಕೆ ಸಿದ್ದರಾಮಯ್ಯನವರ ಗ್ರೀನ್​ ಸಿಗ್ನಲ್ ಬಾಕಿ ಇದೆ.. ಈ ಮಧ್ಯೆ ಬಿಜೆಪಿಯಿಂದ ಯಡಿಯೂರಪ್ಪ ಸೇರಿದಂತೆ ಯಾರೇ ಬಂದ್ರೂ ಮತ್ತೆ ಬದಾಮಿಯಿಂದ ನೂರಕ್ಕೆ ನೂರರಷ್ಟು ಸಿದ್ದರಾಮಯ್ಯನವರನ್ನ ಗೆಲ್ಲಿಸುತ್ತೇವೆ ಅನ್ನೋ ಹುಮ್ಮಸಿನಲ್ಲಿದ್ದಾರೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​..

RELATED ARTICLES

Related Articles

TRENDING ARTICLES