ಕಲಬುರಗಿ : ತಮ್ಮ ತಟ್ಟೆಯಲಿ ಹೆಗ್ಗಣ ಬಿದ್ದಿರೋದು ನೋಡದೆ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಬಿಡಬೇಕು ಎಂದು ಸೇಡಂ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಕಿಡಿಕಾಡಿದಾರೆ.
ಮುಂದಿನ ದಿನದಲ್ಲಿ ಭಾರತ ಭ್ರಷ್ಟಾಚಾರದಲ್ಲಿ ನಂಬರ್ 1 ದೇಶ ಆಗುತ್ತೆ ಅನ್ನೋ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರದಿಂದ ದೇಶದಲ್ಲಿ ಹೇಳ ಹೆಸರಿಲ್ಲದೆ ಮಾಯವಾಗಿದೆ. ಅತಳ , ಪಾತಾಳ , ಭೂಮಿಯಲ್ಲಿ ಭ್ರಷ್ಟಾಚಾರ ಮಾಡಿ ದೇಶದಲ್ಲಿ ಹೇಳ ಹೆಸರಿಲ್ಲದೆ ಮಾಯವಾಗಿದೆ. ಇದೇ ರೀತಿ ಹೇಳಿಕೆ ಕೊಟ್ಟರೆ ಮುಂದಿನ ದಿನಗಳಲ್ಲಿ ಕಲಬುರಗಿಯಲ್ಲಿ ಮೂರು ಸ್ಥಾನ ಗೆದ್ದಿರೋದನ್ನು ಕಳೆದುಕೊಳ್ಳೊದು ನಿಶ್ಚಿತ ಎಂದು ಖರ್ಗೆ ಅವರ ವಿರುದ್ಧ ಹರಿಹಾಯ್ದಿದ್ದಾರೆ.
ಇನ್ನು ಕಾಂಗ್ರೆಸ್ ಅವರಿಗೆ ಬೇರೆ ಉತ್ಸವ ಮಾಡೋದಕ್ಕೆ ವಿಷಯ ಇಲ್ಲ. ಹಾಗಾಗಿ ಸಿದ್ದರಾಮೋತ್ಸವ ಮಾಡ್ತಾರೆ ಮುಂದೆ ಡಿಕೆ ಉತ್ಸವ, ಖರ್ಗೆ ಉತ್ಸವ ಅಂತೆಲ್ಲಾ ಮಾಡ್ತಾರೆ ಎಂದು ಟೀಕಿಸಿದರು. ನಾವು ಅಭಿವೃದ್ಧಿ ಪರ್ವವಾದ ಉತ್ಸವ ಮಾಡ್ತೇವೆ. ಅವರು ತಮ್ಮ ಲೀಡರ್ ಉತ್ಸವ ಮಾಡಿ ವಿನಾಶದ ಅಂಚಿಗೆ ತಲುಪಿಸ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.