ಬೆಂಗಳೂರು : ಸಿದ್ದರಾಮಯ್ಯ ಉತ್ಸವದಿಂದ ನಮಗೆ ಭಯವೂ ಇಲ್ಲ ಹೊಟ್ಟೆಕಿಚ್ಚು ಇಲ್ಲ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಾಲ್ಕೈದು ಲಕ್ಷ ಜನರನ್ನು ಸೇರಿಸಲಿ. ನಾವು ಅವರಿಗೆ ಸಹಕಾರ ನೀಡ್ತೇವೆ. ನಮಗೆ ಅವರ ಕಾರ್ಯಕ್ರಮದಿಂದ ಹೊಟ್ಟೆ ಕಿಚ್ಚು ಇಲ್ಲ. ಆದರೆ ಈ ಕಾರ್ಯಕ್ರಮ ಶುರು ಆದಾಗಿಂದ ಡಿಕೆ ಶಿವಕುಮಾರ್ ನಿದ್ದೆ ಮಾಡ್ತಿಲ್ಲ. ಸಿದ್ದರಾಮಯ್ಯ ಎಲ್ಲಾರನ್ನೂ ಮುಗಿಸಿದ್ರು ಈಗ ಡಿಕೆ ಶಿವಕುಮಾರ್ ನ್ನು ಮುಗಿಸಲು ಹೊರಟಿದ್ದಾರೆ ಎಂದರು.
ಇನ್ನು, ಖರ್ಗೆಯವರನ್ನು ದೂರ ಇಟ್ಟಿದ್ದಾರೆ. ಪರಮೇಶ್ವರನ್ನು ಸೋಲಿಸಿದ್ರು. ಈಗ ಡಿಕೆ ಶಿವಕುಮಾರ್ ಮುಗಿಸಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ. ಸಿದ್ದರಾಮಯ್ಯ ಉತ್ಸವದಿಂದ ನಮಗೆ ಭಯವೂ ಇಲ್ಲ ಹೊಟ್ಟೆಕಿಚ್ಚು ಇಲ್ಲ. ಭಯ ಆಗ್ತಿರೋದು ಡಿಕೆ ಶಿವಕುಮಾರ್ಗೆ. ದಲಿತ ಸಿಎಂ ಆಗುವ ಅವಕಾಶವನ್ನು ಖರ್ಗೆಗೆ ಸಿದ್ದರಾಮಯ್ಯ ತಪ್ಪಿಸಿದ್ರು ಈಗ ಡಿಕೆ ಶಿವಕುಮಾರ್ ಮುಗಿಸಲು ಹೊರಟಿದ್ದಾರೆ. ಡಿಕೆಶಿ ,ಸಿದ್ದರಾಮಯ್ಯ ಶೀತಲ ಸಮರಕ್ಕೆ ತುಪ್ಪ ಸುರಿದಿದ್ದಾರೆ ಎಂದು ಹೇಳಿದರು.