Saturday, May 18, 2024

ಬಿ.ಸಿ.ನಾಗೇಶ್‌ಗೆ ವಾರ್ನಿಂಗ್‌ ಕೊಟ್ಟ RSS ಮುಖಂಡರು

ಬೆಂಗಳೂರು : ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದಿಂದ RSS ಚಡ್ಡಿಗೆ ಬೆಂಕಿ ಹಾಕಿದ ಹಿನ್ನೆಲೆ ಶಿಕ್ಷಣ ಸಚಿವ ಬಿಸಿ ನಾಗೇಶ್ ವಿರುದ್ಧ RSS ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನಿಮ್ಮ ನಿರ್ಲಕ್ಷ್ಯದಿಂದ ಇಡೀ ಸಂಘ ಪರಿವಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇಷ್ಟೊಂದು ವಿವಾದಕ್ಕೆ ಯಾರು ಕಾರಣ ? ನೀವು ತೆಗೆದುಕೊಂಡಂತ ತೀರ್ಮಾನಗಳಿಂದಲೇ ಇಷ್ಟೆಲ್ಲಾ ತೊಂದರೆ ಆಗುತ್ತಿದೆ. ಇದರಿಂದ ಪ್ರಭಾವಿ ಸಮುದಾಯದವರು ಬೇಸರಗೊಂಡಿದ್ದಾರೆ ಎಂದು ಕಿಡಿಕಾರಿದರು.

ಅಷ್ಟೇ ಅಲ್ಲದೇ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಎಲ್ಲಾ ಗೊಂದಲಗಳಿಗೂ ಇಂದೇ ತೆರೆ ಎಳೆಯಿರಿ. ಇಲ್ಲವಾದರೆ ಕಾಂಗ್ರೆಸ್​​ನವರು ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ತಾರೆ. ಇದಕ್ಕೆ ಅವಕಾಶ ನೀಡೋದು ಬೇಡ. ಯಾವ ಪಾಠ ಬೇಕೋ ಅದನ್ನೇ ಸೇರಿಸಿ, ವಿವಾದವಾಗುವ ಪಾಠಗಳನ್ನ ಕೂಡಲೇ ಪರಿಷ್ಕರಿಸಿ ಕೈ ಬಿಡಿ ಎಂದು ಆರ್.ಎಸ್.ಎಸ್ ಮುಖಂಡರು ಶಿಕ್ಷಣ ಸಚಿವ ಬಿಸಿ ನಾಗೇಶ್​​ಗೆ ಸಲಹೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES