ಬೆಂಗಳೂರು : ನಮ್ಮಪಕ್ಷದವರ ಯಾರ ರಾಜೀನಾಮೆ ಕೇಳುವ ನೈತಿಕತೆ ಕಾಂಗ್ರೆಸ್ನವರಿಗೆ ಇಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ವಿರೋಧ ಪಕ್ಷದ ನಾಯಕರ ವಿರುದ್ದ ಕಿಡಿಕಾರಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಂದ್ರೆ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹೆಸರಾಗಿದೆ. ಕನಕಪುರದಲ್ಲಿ ಯಾವ ಬಂಡೆ ಲೂಟಿ ಮಾಡಿ ಸ್ವತಃ ಹಗರಣದಲ್ಲಿ ಜೈಲಿಗೆ ಹೋದವರು ಅವರು ಎಂದರು.ಈಶ್ವರಪ್ಪ ಅವರೇ ರಾಜೀನಾಮೆ ನೀಡಿದ್ದಾರೆ. ಅಶ್ವಥ್ ನಾರಾಯಣ್ ಯಾಕೆ ರಾಜೀನಾಮೆ ಕೊಡಬೇಕು.? ಎಂದು ಗುಡುಗಿದರು.
ಇನ್ನು ಅವರ ತಮ್ಮ ಸುರೇಶ್ ಅವರು ಅಶ್ವಥ್ ನಾರಾಯಣ್ ಜನರ ಸಮ್ಮುಖದಲ್ಲಿ ಗೂಂಡಾ ರೀತಿಯಲ್ಲಿ ಮಾಡಿದ್ದು ನೋಡಿದ್ದಾರೆ. ಅಶ್ವಥ್ ನಾರಾಯಣ್ ಅವರನ್ನ ಟಾರ್ಗೆಟ್ ಮಾಡಿದ್ದಾರೆ. ನಮ್ಮ ಪಕ್ಷದವರ ಯಾರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ. ಎಡಿಜಿಪಿ ಮದುಕರ್ ರಜೆ ತೆಗೆದುಕೊಂಡು ಹೋಗಿದ್ದಾರೆ. ದಿವ್ಯ ಹಾಗರಗಿ ಆಗಿರಬಹುದು ಅಥವಾ ಬೇರೆಯವರೇ ಆಗಿರಬಹುದು ಬಂಧನ ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಜಟಾಪಟಿ ನಡೆಯುತ್ತಿದೆ. ನಾನು ಸಿಎಂ ಆಗಬೇಕು ಅಂತ. ಡಿಕೆಶಿಗೆ ನೀವು ಬೆಂಬಲ ನೀಡಿದರೆ, ನಿಮಗೆ ಒಳ್ಳೆಯದಾಗಲ್ಲ. ಸಿದ್ದರಾಮಯ್ಯ ಅವರೇ ಡಿಕೆಶಿ ಇಂದ ದೂರ ಇರಿ ಎಂದು ಬುದ್ದಿವಾದ ಹೇಳಿದರು.
ಅದುವಲ್ಲದೇ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಚಿವ ಸಂಪುಟ ಯಾವಾಗ ರಚನೆ ಮಾಡಬೇಕು ಅನ್ನೋದು ಹೈಕಮಾಂಡ್ ಗೆ ಬಿಟ್ಟ ವಿಚಾರವಾಗಿದೆ. ಆದ್ರೆ, ಯತ್ನಾಳ್ ಯಾವ ರೀತಿ ಹೇಳಿದ್ದಾರೆ ಗೊತ್ತಿಲ್ಲ. ಆದಷ್ಟು ಬೇಗ ಸಚಿವ ಸಂಪುಟ ರಚನೆ ಮಾಡಬೇಕು ಅನ್ನೋ ಒತ್ತಾಯ ಇದೆ. ಆದಷ್ಟು ಬೇಗ ಆದರೆ ಉತ್ತಮವಾಗಿರುತ್ತದೆ ಹಾಗೂ ಯತ್ನಾಳ್ ಅವರು ಕೇಂದ್ರದಲ್ಲಿ ಸಚುವರಾಗಿದ್ದರು, ಅವರ ಬಗ್ಗೆ ನಾನು ಏನೂ ಹೇಳೋದಿಲ್ಲ ಎಂದು ಪ್ರತಿಕ್ರಿಯಿಸಿದರು.